ಅಷ್ಟಕ್ಕೇ ಸುಮ್ಮನಾಗದ ಮಾಯಾವತಿಯವರು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿರುದ್ಧ ಕೂಡ ಹರಿಹಾಯ್ದಿದ್ದು ಅವರು ಬಿಜೆಪಿ ಜೊತೆ ಒಳಸಂಚು ನಡೆಸುತ್ತಿದ್ದು ತಮ್ಮನ್ನು ತಾಜ್ ಕಾರಿಡಾರ್ ಕೇಸಿನಲ್ಲಿ ಸಿಕ್ಕಿಸಿ ಹಾಕಲು ನೋಡುತ್ತಿದ್ದಾರೆ ಎಂದು ಆರೋಪಿಸಿದರು.
ಲೋಕಸಭೆ ಚುನಾವಣೆಯ ಮತ ಎಣಿಕೆ ದಿನ ತಾನು ಅಖಿಲೇಶನ್ನು ಕರೆದರೂ ಕೂಡ ಅವರು ತಮ್ಮ ಕರೆಯನ್ನು ಸ್ವೀಕರಿಸಲಿಲ್ಲ. ನನ್ನ ಪಕ್ಷದ ಕಾರ್ಯಕರ್ತರು ಎಲ್ಲಿ ಬೆಂಬಲ ನೀಡಲಿಲ್ಲ ಎಂದು ಕರೆದು ಕುಳಿತು ಮಾತನಾಡಬಹುದಾಗಿತ್ತು, ಆ ಕೆಲಸ ಮಾಡಲಿಲ್ಲ, ವಿಧಾನಸಭೆ ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಚುನಾವಣೆ ಎದುರಿಸುವ ಬಗ್ಗೆ ತಮ್ಮಲ್ಲಿ ಹೇಳದೆ ಬಿಎಸ್ಪಿ ನಾಯಕ ಸತೀಶ್ ಚಂದ್ರ ಮಿಶ್ರಾ ಅವರಲ್ಲಿ ಹೇಳಿದ್ದಾರೆ ಅಖಿಲೇಶ್ ಎಂದು ಕೂಡ ಸಭೆಯಲ್ಲಿ ಆರೋಪಿಸಿದ್ದಾರೆ ಎಂದು ತಿಳಿದುಬಂದಿದೆ.