ಹರಿಯಾಣ: ಕಾಂಗ್ರೆಸ್‌ ನಾಯಕ ವಿಕಾಸ್‌ ಚೌಧರಿ ಬರ್ಬರ ಹತ್ಯೆ

ಹರಿಯಾಣದ ಕಾಂಗ್ರೆಸ್‌ ವಕ್ತಾರರಾಗಿದ್ದ ವಿಕಾಸ್‌ ಚೌಧರಿ ಅವರನ್ನು ಗುರುವಾರ ಬೆಳಗ್ಗೆ ದುಷ್ಕರ್ಮಿಗಳ ಗುಂಪು ಭೀಕರ ಗುಂಡಿನ ದಾಳಿ ನಡೆಸಿ ಬರ್ಬರವಾಗಿ ...
ವಿಕಾಸ್‌ ಚೌಧರಿ
ವಿಕಾಸ್‌ ಚೌಧರಿ
ನವದೆಹಲಿ: ಹರಿಯಾಣಾದ ಕಾಂಗ್ರೆಸ್‌ ವಕ್ತಾರರಾಗಿದ್ದ ವಿಕಾಸ್‌ ಚೌಧರಿ ಅವರನ್ನು ಗುರುವಾರ ಬೆಳಗ್ಗೆ ದುಷ್ಕರ್ಮಿಗಳ ಗುಂಪು ಭೀಕರ ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಜಿಮ್‌ಗೆ ಆಗಮಿಸಿದ್ದ ಚೌಧರಿ ಅವರು ಕಾರಿನಿಂದ ಇಳಿಯುತ್ತಿದ್ದಂತೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. 8 ರಿಂದ 10 ಗುಂಡುಗಳನ್ನು ಚೌಧರಿ ಅವರನ್ನು ಗುರಿಯಾಗಿರಿಸಿಕೊಂಡು ಹಾರಿಸಿದ್ದಾರೆ,
ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ದುಷ್ಕರ್ಮಿಗಳ ಪತ್ತೆಯಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಪೊಲೀಸರ ತಂಡಗಳನ್ನು ತನಿಖೆಗಾಗಿ ರಚಿಸಲಾಗಿದೆ. ಜಿಮ್ ಸಿಸಿಟಿವಿಯಲ್ಲಿ ಹತ್ಯೆಯ ದೃಶ್ಯಗಳು ಸೆರೆಯಾಗಿವೆ,  ಎರಡು ಕಡೆಯಿಂದ ವಿಕಾಸ್ ಚೌಧರಿ ಮೇಲೆ ದಾಳಿ ನಡೆದಿರುವುದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com