ಅಭಿನಂದನ್ ಕೇವಲ ದೈಹಿಕವಾಗಿ ಮಾತ್ರವಲ್ಲದೇ ಅವರನ್ನು ಮಾನಸಿಕವಾಗಿಯೂ ಪರೀಕ್ಷೆ ಮಾಡಲಾಗುತ್ತದೆಯಂತೆ. ಅಭಿನಂದನ್ ವೈರಿ ರಾಷ್ಟ್ರದಲ್ಲಿ ಏಕಾಂಗಿಯಾಗಿದ್ದರು. ಭಾರತದ ಭದ್ರತಾ ರಹಸ್ಯಗಳನ್ನು ಹೇಳುವಂತೆ ಅಲ್ಲಿನ ಅಧಿಕಾರಿಗಳು ಒತ್ತಡ ಹೇರಿರುವ ಸಾಧ್ಯತೆ ಇರುತ್ತದೆ. ಹಾಗಾಗಿ, ಈ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಬಂಧನದಲ್ಲಿದ್ದಾಗ ಪಾಕಿಸ್ತಾನ ಯಾವ ರೀತಿಯ ಮಾಹಿತಿಗಳನ್ನು ಕೇಳಿತ್ತು. ಅದರಲ್ಲಿ ಯಾವ ಪ್ರಶ್ನೆಗಳಿಗೆ ಇವರು ಉತ್ತರ ನೀಡಿದರು ಎನ್ನುವ ಬಗ್ಗೆ ಅಭಿನಂದನ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿರುತ್ತದೆ. ಮಾಹಿತಿ ಸಂಗ್ರಹಣೆಗೆ ವೈರಿ ರಾಷ್ಟ್ರದವರು ತನ್ನನ್ನು ನೇಮಕ ಮಾಡಿಕೊಂಡಿಲ್ಲ ಎಂಬ ಖಾತ್ರಿಯನ್ನು ಅಭಿನಂದನ್ ವಾಯುಸೇನೆ ಅಧಿಕಾರಿಗಳಿಗೆ ನೀಡಬೇಕು. ಇದು ಬೇಸರದ ಸಂಗತಿಯಾದರೂ, ದೇಶದ ಭದ್ರತಾ ಹಿತದೃಷ್ಟಿಯಿಂದ ಅನಿವಾರ್ಯದ ಪ್ರಕ್ರಿಯೆಯಾಗಿರುತ್ತದೆ.