ಬೇರೆಯವರು ದೇಶವನ್ನು ಲೂಟಿ ಮಾಡಿ ಓಡಿ ಹೋದರು, ನಾನು ಇನ್ನೂ ಇಲ್ಲೇ ಇದ್ದೇನೆ: ರಾಬರ್ಟ್ ವಾಧ್ರ

ಬೇರೆಯವರು ದೇಶವನ್ನು ಲೂಟಿ ಮಾಡಿ ಹೋದರು, ನಾನು ಇನ್ನೂ ಇಲ್ಲೇ ಇದ್ದೇನೆ ಎಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಉದ್ಯಮಿ ರಾಬರ್ಟ್ ವಾಧ್ರ ಹೇಳಿದ್ದಾರೆ.
ಬೇರೆಯವರು ದೇಶವನ್ನು ಲೂಟಿ ಮಾಡಿ ಓಡಿ ಹೋದರು, ನಾನು ಇನ್ನೂ ಇಲ್ಲೇ ಇದ್ದೇನೆ: ರಾಬರ್ಟ್ ವಾಧ್ರ
ಬೇರೆಯವರು ದೇಶವನ್ನು ಲೂಟಿ ಮಾಡಿ ಓಡಿ ಹೋದರು, ನಾನು ಇನ್ನೂ ಇಲ್ಲೇ ಇದ್ದೇನೆ: ರಾಬರ್ಟ್ ವಾಧ್ರ
ನವದೆಹಲಿ: ಬೇರೆಯವರು ದೇಶವನ್ನು ಲೂಟಿ ಮಾಡಿ ಹೋದರು, ನಾನು ಇನ್ನೂ ಇಲ್ಲೇ ಇದ್ದೇನೆ ಎಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಉದ್ಯಮಿ ರಾಬರ್ಟ್ ವಾಧ್ರ ಹೇಳಿದ್ದಾರೆ. 
ದೇಶವನ್ನು ಲೂಟಿ ಮಾಡಿದ ಅನೇಕ ಜನರು ದೇಶವನ್ನು ಬಿಟ್ಟು ಹೋಗಿದ್ದಾರೆ, ನಾನು ಇಲ್ಲೇ ಇದ್ದೇನೆ ಹಾಗೂ ದೇಶವನ್ನು ಎಂದಿಗೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ರಾಜಕಾರಣಕ್ಕೆ ಬಂದಿರುವ  ಐಸಿಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕ ವಾಧ್ರ ವಿರುದ್ಧ ರಾಬರ್ಟ್ ವಾಧ್ರ ಅವರ ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ಟೀಕೆ ಮಾಡಲಾಗುತ್ತಿದೆ. 
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಾಬರ್ಟ್ ವಾಧ್ರ, ನಾನು ಈ ದೇಶದಲ್ಲಿಯೇ ಇದ್ದೇನೆ, ದೇಶವನ್ನು ಲೂಟಿ ಮಾಡಿರುವ ಹಲವು ಜನರು ದೇಶ ಬಿಟ್ಟು ಓಡಿ ಹೋಗಿದ್ದಾರೆ, ಅವರ ಕತೆ ಏನು? ನಾನು ಎಂದಿಗೂ ಇಲ್ಲೇ ಇರುತ್ತೇನೆ, ನಾನು ರಾಜಕಾರಣಕ್ಕೆ ಪ್ರವೇಶಿಸುವುದಿಲ್ಲ. ನಾನು ಆರೋಪ ಮುಕ್ತನಾಗುತ್ತೇನೆ ಎಂದು ರಾಬರ್ಟ್ ವಾಧ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com