ಪಣಜಿ:ಮನೋಹರ್ ಪರಿಕ್ಕರ್ ನಿಧನದ ನಂತರ ಮುಂದಿನ ಗೋವಾ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಎದಿದ್ದು, ಆಡಳಿತಾರೂಢ ಬಿಜೆಪಿಯ ಪ್ರಮೋದ್ ಸಾವಂತ್ ಹೆಸರು ಮುಂಚೂಣಿಯಲ್ಲಿದೆ.
ಕಾಂಗ್ರೆಸ್ ಸರ್ಕಾರ ರಚನೆಗೆ ಎರಡು ದಿನಗಳ ಹಿಂದೆಯೇ ಹಕ್ಕು ಮಂಡಿಸಿದ್ದು,ಬಿಜೆಪಿ ಸರ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ಕಳೆದ ರಾತ್ರಿ ಮೈತ್ರಿ ಪಕ್ಷಗಳೊಂದಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಭೆ ನಡೆಸಿದ್ದಾರೆ.
ಮನೋಹರ್ ಪರಿಕ್ಕರ್ ಉತ್ತರಾಧಿಕಾರಿಯಾಗಿ ಗೋವಾ ಆಸೆಂಬ್ಲಿ ಸ್ಪೀಕರ್ ಪ್ರಮೋದ್ ಸಾವಂತ್, ಮೈತ್ರಿ ಪಕ್ಷದ ಸುದೀನ್ ದಾವಾಲಿಕರ್, ಮತ್ತು ಗೋವಾ ಪಾರ್ವಡ್ ಪಾರ್ಟಿಯ ವಿಜಯ್ ಸರ್ ದೇಸಾಯಿ ಹೆಸರು ಪ್ರಸ್ತಾಪಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement