ಮನೋಹರ್ ಪರ್ರಿಕರ್ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸಂತಾಪ

ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸೋಮವಾರ ...
ಮನೋಹರ್ ಪರ್ರಿಕರ್
ಮನೋಹರ್ ಪರ್ರಿಕರ್
Updated on
ನವದೆಹಲಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸೋಮವಾರ ಸಂತಾಪ ಸೂಚಿಸಿತು. ಪರ್ರಿಕರ್ ಅವರ ಸರಳತೆ ಮತ್ತು ಆಡಳಿತ ಶೈಲಿಯಿಂದ ಅವರು ಸದಾ ನೆನಪಿನಲ್ಲಿಳಿಯುವ ರಾಜಕಾರಣಿ ಎಂದು ಕೊಂಡಾಡಿದ ಸಂಪುಟ ಸದಸ್ಯರು ಎರಡು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಿ ನಿರ್ಣಯವೊಂದನ್ನು ಹೊರಡಿಸಿತು. ಅದರಲ್ಲಿ ದೇಶ ಒಬ್ಬ ಅಭೂತಪೂರ್ವ ಆಡಳಿತಗಾರನನ್ನು ಕಳೆದುಕೊಂಡಿದೆ.
ಅವರನ್ನು ಪ್ರೀತಿಯಿಂದ ಸಾಮಾನ್ಯರ ಮುಖ್ಯಮಂತ್ರಿ ಎಂದು ಕರೆಯುತ್ತಿದ್ದರು ಎಂದು ಸ್ಮರಿಸಿದರು.
ಕೇಂದ್ರ ಸಚಿವ ಸಂಪುಟ ಸದಸ್ಯರು ಹೊರಡಿಸಿದ ನಿರ್ಣಯದಲ್ಲಿ, ಪರ್ರಿಕರ್ ಅವರ ಸರಳತೆ ಮತ್ತು ಅದ್ವಿತೀಯ ಆಡಳಿತ ಎಲ್ಲರಿಗೂ ಮಾದರಿಯಾದದ್ದು. ಆಧುನಿಕ ಗೋವಾ ನಿರ್ಮಾಣದಲ್ಲಿ ಮತ್ತು ಭಾರತೀಯ ಸೇನಾ ಪಡೆಯ ಆಧುನೀಕರಣಕ್ಕೆ ಹಾಗೂ ಮಾಜಿ ಸೈನಿಕರ ಜೀವನ ಮಟ್ಟ ಸುಧಾರಣೆಗೆ ಅವರ ಸೇವೆ ಅಪಾರ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com