ಭೋಪಾಲ್: ಬುರ್ಕಾ ನಿಷೇಧಿಸಿದರೆ ಗುಂಘಟ್ ನ್ನೂ ನಿಷೇಧಿಸಬೇಕೆಂದು ಕವಿ ಜಾವೇದ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.
ಲಂಕಾದಲ್ಲಿ ಭಯೋತ್ಪಾದಕರ ದಾಳಿ ಘಟನೆ ಬಳಿಕ ಅಲ್ಲಿನ ಸರ್ಕಾರ ಬುರ್ಕಾ ಗೆ ನಿಷೇಧ ವಿಧಿಸಿತ್ತು. ಈ ಬೆನ್ನಲ್ಲೇ ಭಾರತದಲ್ಲೂ ಬುರ್ಕಾ ನಿಷೇಧಿಸಬೇಕೆಂದು ಶಿವಸೇನೆ ಆಗ್ರಹಿಸಿತ್ತು. ಶಿವಸೇನೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಾವೇದ್ ಅಖ್ತರ್,
ದೇಶದಲ್ಲಿ ಬುರ್ಕಾವನ್ನು ಬ್ಯಾನ್ ಮಾಡುವುದೇ ಆದರೆ ರಾಜಸ್ಥಾನದಲ್ಲಿ ಹಿಂದೂ ಮಹಿಳೆಯರು ಧರಿಸುವ ಗುಂಘಟ್ ನಿಷೇಧಿಸಬೇಕು ಎಂದು ಹೇಳಿದ್ದಾರೆ.
ಬುರ್ಕಾ ನಿಷೇಧಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ರಾಜಸ್ಥಾನದಲ್ಲಿ ಗುಂಘಟ್ ಮೇಲೂ ನಿಷೇಧ ಹೇರಬೇಕೆಂದು ಜಾವೇದ್ ಅಖ್ತರ್ ಹೇಳಿದ್ದಾರೆ.