ನವದೆಹಲಿ: ಬ್ಯಾಂಕ್ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪಿಗಳಾದ ಉದ್ಯಮಿ ವಿಜಯ್ ಮಲ್ಯ ಹಾಗೂ ವಜ್ರದ ವ್ಯಾಪಾರಿ ನೀರವ್ ಮೋದಿ ಹಸ್ತಾಂತರ ಸಂಬಂಧ ವಿವರಗಳನ್ನು ಹಂಚಿಕೊಳ್ಳಲು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ. ಆರೋಪಿಗಳ ವಿಚಾರಣೆ ನಡೆಯುತ್ತಿರುವ ವೇಳೆ ಅವರ ಸಂಬಂಧ ವಿವರ ಬಹಿರಂಗ ಪಡಿಸುವುದು ಅಪಾಯಕಾರಿಯಾಗಲಿದೆ ಎಂಬ ಆರ್ಟಿಐ ಕಾಯ್ದೆಯಲ್ಲಿನನಿಯಮವನ್ನು ಉಲ್ಲೇಖಿಸಿ ಸಚಿವಾಲಯ ಮಾಹಿತಿ ಬಹಿರಂಗಕ್ಕೆ ನಿರಾಕರಿಸಿದೆ.