'ಮಹಾ'ಸರ್ಕಾರ ರಚಿಸಲು ಗವರ್ನರ್ ಆಹ್ವಾನ: ಇಂದು ಬಿಜೆಪಿ ಕೋರ್ ಸಮಿತಿ ಸಭೆ 

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಂತೆ ಬಿಜೆಪಿಗೆ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಆಹ್ವಾನ ನೀಡಿದ ನಂತರ ಈ ಬಗ್ಗೆ ಚರ್ಚಿಸಲು ಬಿಜೆಪಿ ಕೋರ್ ಸಮಿತಿ ಸಭೆ ಭಾನುವಾರ ನಡೆಯಲಿದೆ.
'ಮಹಾ'ಸರ್ಕಾರ ರಚಿಸಲು ಗವರ್ನರ್ ಆಹ್ವಾನ: ಇಂದು ಬಿಜೆಪಿ ಕೋರ್ ಸಮಿತಿ ಸಭೆ 

ಮುಂಬೈ; ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಂತೆ ಬಿಜೆಪಿಗೆ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಆಹ್ವಾನ ನೀಡಿದ ನಂತರ ಈ ಬಗ್ಗೆ ಚರ್ಚಿಸಲು ಬಿಜೆಪಿ ಕೋರ್ ಸಮಿತಿ ಸಭೆ ಭಾನುವಾರ ನಡೆಯಲಿದೆ.


ಅಧಿಕಾರ ಹಂಚಿಕೆ, ಸಿಎಂ ಹುದ್ದೆ ಹಂಚಿಕೆ ವಿಚಾರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಭಿನ್ನಾಭಿಪ್ರಾಯ ಉಲ್ಭಣಿಸಿದ್ದು ಚುನಾವಣೆ ಫಲಿತಾಂಶ ಬಂದು 15 ದಿನಗಳಾದರೂ ಮಹಾರಾಷ್ಟ್ರದಲ್ಲಿ ಯಾವ ಪಕ್ಷಗಳು ಸರ್ಕಾರ ರಚಿಸಲು ಬಹುಮತ ಸಾಬೀತುಪಡಿಸಿಲ್ಲ. ಸರ್ಕಾರ ರಚನೆಗಿರುವ ಎಲ್ಲಾ ಸಾಧ್ಯತೆಗಳನ್ನು ರಾಜ್ಯಪಾಲರು ಹುಡುಕುತ್ತಿದ್ದಾರೆ.

ಕಳೆದ ವಿಧಾನಸಭೆಯ ಅವಧಿ ನಿನ್ನೆಗೆ ಮುಕ್ತಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com