ಮುಂಬೈ: ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾದ ನಂತರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಮ್ಮ ಟ್ವಿಟ್ಟರ್ ಖಾತೆ ಪ್ರೊಫೈಲ್ ನಲ್ಲಿ ಉಸ್ತುವಾರಿ ಸಿಎಂ ತೆಗೆದುಹಾಕಿದ್ದಾರೆ. ಮಾಜಿ ಸಿಎಂ ಎಂದು ಕೂಡ ಹೇಳಿಕೊಂಡಿಲ್ಲ. ಇದೀಗ ಅವರ ಪ್ರೊಫೈಲ್ ನಲ್ಲಿ ಮಹಾರಾಷ್ಟ್ರ ಸೇವಕ ಎಂದು ಬರೆದುಕೊಂಡಿದ್ದಾರೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ದುರದೃಷ್ಟಕರ,ಸದ್ಯದಲ್ಲಿಯೇ ಸ್ಥಿರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ.
Advertisement
Advertisement