ರಾಜೀವ್ ಕುಮಾರ್ ತನಿಖೆಗೆ ಸಹಕರಿಸದಿದ್ದರೆ ಸಿಬಿಐ ಬಂಧಿಸಬಹುದು: ಕೋರ್ಟ್

ಶಾರದಾ ಚಿಟ್ ಫಂಡ್ ಹಗರಣದಲ್ಲಿ ಕೋಲ್ಕತಾ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ತನಿಖೆಗೆ ಸಹಕರಿಸಬೇಕು ಎಂದು ಕೋರ್ಟ್ ಹೇಳಿದೆ.
ಮಮತಾ ಬ್ಯಾನರ್ಜಿ-ರಾಜೀವ್ ಕುಮಾರ್
ಮಮತಾ ಬ್ಯಾನರ್ಜಿ-ರಾಜೀವ್ ಕುಮಾರ್
Updated on

ಕೋಲ್ಕತ್ತಾ: ಶಾರದಾ ಚಿಟ್ ಫಂಡ್ ಹಗರಣದಲ್ಲಿ ಕೋಲ್ಕತಾ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ತನಿಖೆಗೆ ಸಹಕರಿಸಬೇಕು ಎಂದು ಕೋರ್ಟ್ ಹೇಳಿದೆ.

ಕೇಂದ್ರ ತನಿಖಾ ಸಂಸ್ಥೆಗೆ ಸಹಕರಿಸದಿದ್ದರೆ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಸಿಬಿಐಗೆ ಬಂಧನದ ವಾರಂಟ್ ಪಡೆಯುವ ಅಗತ್ಯವಿಲ್ಲ ಎಂದು ಅಲಿಪುರ್ ನ್ಯಾಯಾಲಯ ಇಂದು ಅಭಿಪ್ರಾಯಪಟ್ಟಿದೆ.

ರಾಜೀವ್ ಕುಮಾರ್ ಅವರು ಪ್ರಸ್ತುತ ಸಿಐಡಿಯ ಎಡಿಜಿಯಾಗಿದ್ದಾರೆ. ರಾಜೀವ್ ಕುಮಾರ್ ಮತ್ತು ಸಿಬಿಐ ಪರ ವಕೀಲರ ವಾದ-ವಿವಾದಗಳನ್ನು ಆಲಿಸಿದ ಬಳಿಕ ಅಲಿಪುರ್ ಸೆಷನ್ಸ್ ಕೋರ್ಟ್‍ನ ನ್ಯಾಯಾಧೀಶರು, ಸಿಬಿಐಗೆ ಸುಪ್ರೀಂ ಕೋರ್ಟ್ ಮತ್ತು ಕೋಲ್ಕತ್ತಾ ಹೈಕೋರ್ಟ್ ಗಳ ನಿರ್ದೇಶನ ಇರುವುದರಿಂದ ಅವರನ್ನು ಬಂಧಿಸಲು ಈ ನ್ಯಾಯಾಲಯದಿಂದ ವಾರಂಟ್ ಆದೇಶವನ್ನು ಪಡೆಯುವ ಅಗತ್ಯವಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com