ಕಾಶ್ಮೀರಕ್ಕೆ ಆರ್ಟಿಕಲ್ 370 ರದ್ದು!: ರಾಷ್ಟ್ರೀಯ ಏಕೀಕರಣ ಗಟ್ಟಿಗೊಳಿಸುವ ದಿಟ್ಟ ಹೆಜ್ಜೆ: ಅಡ್ವಾಣಿ ಮೆಚ್ಚುಗೆ!

ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ನ್ನು ರದ್ದುಗೊಳಿಸಿದ್ದರ ಬಗ್ಗೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಶ್ಮೀರಕ್ಕೆ ಆರ್ಟಿಕಲ್ 370 ರದ್ದು!: ರಾಷ್ಟ್ರೀಯ ಏಕೀಕರಣ ಗಟ್ಟಿಗೊಳಿಸುವ ದಿಟ್ಟ ಹೆಜ್ಜೆ: ಮೋದಿಗೆ ಅಡ್ವಾಣಿ ಮೆಚ್ಚುಗೆ!
ಕಾಶ್ಮೀರಕ್ಕೆ ಆರ್ಟಿಕಲ್ 370 ರದ್ದು!: ರಾಷ್ಟ್ರೀಯ ಏಕೀಕರಣ ಗಟ್ಟಿಗೊಳಿಸುವ ದಿಟ್ಟ ಹೆಜ್ಜೆ: ಮೋದಿಗೆ ಅಡ್ವಾಣಿ ಮೆಚ್ಚುಗೆ!
ನವದೆಹಲಿ: ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ನ್ನು ರದ್ದುಗೊಳಿಸಿದ್ದರ ಬಗ್ಗೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಪ್ರತಿಕ್ರಿಯೆ ನೀಡಿದ್ದಾರೆ. 
ಆರ್ಟಿಕಲ್ 370ಯನ್ನು ರದ್ದುಗೊಳಿಸಿರುವುದನ್ನು ರಾಷ್ಟ್ರಿಯ ಏಕೀಕರಣವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಕೇಂದ್ರ ಸರ್ಕಾರದ ನಿರ್ಧಾರದಿಂದ ಸಂತಸವಾಗಿದೆ. ಕೇಂದ್ರದ ನಿರ್ಧಾರ ರಾಷ್ಟ್ರಿಯ ಏಕೀಕರಣವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಎಂದು ಅಡ್ವಾಣಿ ಹೇಳಿಕೆ ಬಿಡುಗಡೆ ಮಾದಿದ್ದಾರೆ. 
ಆರ್ಟಿಕಲ್ 370 ನ್ನು ರದ್ದುಗೊಳಿಸುವುದು ಜನಸಂಘದ ದಿನದಿಂದಲೂ ಬಿಜೆಪಿಯ ಪ್ರಮುಖ ಸಿದ್ಧಾಂತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಐತಿಹಾಸಿಕ ನಿರ್ಣಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಜಮ್ಮು-ಕಾಶ್ಮೀರ, ಲಡಾಕ್ ನಲ್ಲಿ ಶಾಂತಿ ಸೌಹಾರ್ದತೆ, ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ ಎಂದು ಅಡ್ವಾಣಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com