ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ವಿಧೇಯಕ ನಿನ್ನೆ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿತ್ತು. ಇಂದು ಲೋಕಸಭೆಯಲ್ಲಿ ಅಮಿತ್ ಶಾ ಮಂಡನೆ ಮಾಡುವ ವೇಳೆ ವಿಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಈ ವೇಳೆ ಮಾತನಾಡಿದ ಕಾಂಗ್ರೆಸ್ ಸಭಾ ನಾಯಕ ರಂಜನ್ ಚೌಧರಿ ಅವರು, ರಾತ್ರೋರಾತ್ರಿ ವಿಶೇಷಾಧಿಕಾರ ರದ್ದು ಮಾಡಿದ್ದೀರಾ. ಅಸಾಂವಿಧಾನಿಕವಾಗಿ ವಿಶೇಷಾಧಿಕಾರ ರದ್ದು ಮಾಡಿದ್ದೇಕೆ? 1948ರಿಂದ ಈ ವಿಚಾರ ವಿಶ್ವಸಂಸ್ಥೆಯಲ್ಲಿದೆ. ಹೀಗಾಗಿ ಇದು ಆಂತರಿಕ ವಿಚಾರ ಹೇಗಾಗುತ್ತೆ ಅಂತ ಪ್ರಶ್ನಿಸಿದ್ದರು.