ಪಾಕಿಸ್ತಾನಕ್ಕೆ ನುಗ್ಗಿ ದಾಳಿ ಮಾಡಲು ಇದು ಸಕಾಲ: ಪುಲ್ವಾಮ ದಾಳಿಯ ಬಗ್ಗೆ ಉದ್ಧವ್ ಠಾಕ್ರೆ

ಪುಲ್ವಾಮದಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯ ಬಗ್ಗೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನದ ಒಳಗೆ ಸ್ಟ್ರೈಕ್ ಮಾಡುವುದಕ್ಕೆ ಇದು ಸೂಕ್ತ ಸಮಯ ಎಂದು ಹೇಳಿದೆ.
ಪಾಕ್ ಒಳಗೆ ಸ್ಟ್ರೈಕ್ ಮಾಡುವುದಕ್ಕೆ ಇದು ಸೂಕ್ತ ಸಮಯ: ಪುಲ್ವಾಮ ದಾಳಿಯ ಬಗ್ಗೆ ಉದ್ಧವ್ ಠಾಕ್ರೆ
ಪಾಕ್ ಒಳಗೆ ಸ್ಟ್ರೈಕ್ ಮಾಡುವುದಕ್ಕೆ ಇದು ಸೂಕ್ತ ಸಮಯ: ಪುಲ್ವಾಮ ದಾಳಿಯ ಬಗ್ಗೆ ಉದ್ಧವ್ ಠಾಕ್ರೆ
ಮುಂಬೈ: ಪುಲ್ವಾಮದಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯ ಬಗ್ಗೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನದ ಒಳಗೆ ಸ್ಟ್ರೈಕ್ ಮಾಡುವುದಕ್ಕೆ ಇದು ಸೂಕ್ತ ಸಮಯ ಎಂದು ಹೇಳಿದೆ. 
ಇದೇ ವೇಳೆ ಗುಪ್ತಚರ ಇಲಾಖೆ ಬಗ್ಗೆ ಮಾತನಾಡಿರುವ ಉದ್ಧವ್ ಠಾಕ್ರೆ, ಗುಪ್ತಚರ ಇಲಾಖೆ ವೈಫಲ್ಯದಿಂದ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿ ನಡೆದಿದ್ದಕ್ಕೆ ಗುಪ್ತಚರ ಇಲಾಖೆ ವೈಫಲ್ಯ ಕಾರಣವಾಗಿದ್ದರೆ ಜವಾಬ್ದಾರಿಯುತ ಸ್ಥಾನದಲ್ಲಿರುವವರನ್ನು ಬದಲಾವಣೆ ಮಾಡಬೇಕು ಎಂದು ಹೇಳಿದ್ದಾರೆ. 
2016 ರಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೆವು. ಈಗ ಪಾಕಿಸ್ತಾನದಲ್ಲಿ ನುಗ್ಗಿ ಪಾಕ್ ಒಳಗೆ ಸ್ಟ್ರೈಕ್ ಮಾಡುವುದಕ್ಕೆ ಸೂಕ್ತ ಸಮಯ ಎಂದು ಉದ್ಧವ್ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ. 
ಚುನಾವಣೆ ಸಂದರ್ಭದಲ್ಲಿ ಮೈತ್ರಿಯ ವಿಷಯಗಳಿರುತ್ತವೆ. ಆದರೆ ಪಾಕಿಸ್ತಾನವನ್ನು ಬಿಡಬಾರದು. ಪಾಕ್ ಗೆ ತಕ್ಕ ಪಾಠ ಕಲಿಸಬೇಕೆಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com