ವಾಜಪೇಯಿಯವರ ಕದಂ ಮಿಲಾಕರ್ ಚಲ್ನಾ ಹೋಗಾ (ಹೆಜ್ಜೆಯೊಂದಿಗೆ ಹೆಜ್ಜೆ ಸೇರಿಸುತ್ತ ಎಲ್ಲರೂ ಒಂದಾಗಿ ಮುಂದೆ ಸಾಗಬೇಕು) ಎಂಬ ಕವನವನ್ನು ಎಂಟನೇ ತರಗತಿ ಪಠ್ಯದಲಿ ಅಳವಡಿಸಲಾಗಿದೆ. ವಸಂತ್ ಎಂಬ ಹೆಸರಿನ ಹಿಂದಿ ಪಠ್ಯಪುಸ್ತಕದಲ್ಲಿ ರಾಮ್ ಧಾರಿ ಸಿಂಗ್ ದಿನಕರ್, ಹಜಾರಿ ಪ್ರಸಾದ್ ದ್ವಿವೇದಿ, ಸೂರ್ಯಕಾಂತ್ ತ್ರಿಪಾಠಿ ಸೇರಿ ಅನೇಕ ಪ್ರಸಿದ್ದ ಬರಹಗಾರರ ಕಥೆ, ಪ್ರಬಂಧ, ಲೇಖನಗಳಿದೆ. ಇದರ ನಡುವೆ ಈಗ ವಾಜಪೇಯಿಯವರ ಕವಿತೆ ಸೇರ್ಪಡಿಸಲಾಗಿದೆ.