ಈತನ ಹೆಸರಿಗೆ ಜಮೀನನ್ನು ವರ್ಗಾವಣೆ ಮಾಡಿಕೊಡಲು ತಹಸೀಲ್ದಾರ 1ಲಕ್ಷ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದರಲ್ಲಿ 50ಸಾವಿರವನ್ನು ರೈತ ನೀಡಿದ್ದ. ಆದಾಗ್ಯೂ ಅವನ ಜಮೀನು ವರ್ಗಾವಣೆ ಆಗಲಿಲ್ಲ, ಉಳಿದ 50 ಸಾವಿರ ಹಣ ನೀಡುವಂತೆ ಒತ್ತಾಯಿಸುತ್ತಿದ್ದ. ಬಾಕಿ ಲಂಚದ ಹಣ ನೀಡಲಾಗದೇ ತಮ್ಮ ಎಮ್ಮೆಯನ್ನೆ ತಂದು ತಹಸೀಲ್ದಾರ್ರ ಸರ್ಕಾರಿ ವಾಹನಕ್ಕೆ ಕಟ್ಟಿಹಾಕಿದ್ದಾನೆ.