ಇದೆಲ್ಲದರ ಮಧ್ಯೆ ದೆಹಲಿಯ ಆಟೋ ಚಾಲಕನೊಬ್ಬ ಮಂಗಳವಾರ ನಡೆದ ಏರ್ ಸ್ಟ್ರೈಕ್ ಅನ್ನು ಸಂಭ್ರಮಿಸಿದ್ದು ದಿನಪೂರ್ತಿ ಎಲ್ಲಾ ಪ್ರಯಾಣಿಕರನ್ನು ಉಚಿತವಾಗಿ ಅವರವರ ನೆಲೆಗಳಿಗೆ ತಲುಪಿಸಿದ್ದಾರೆ. ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಹಾಗೂ ಭಾರತೀಯ ವಾಯು ಪಡೆ ನಡೆಸಿದ ಕಾರ್ಯಾಚರಣೆಗೆ ಗೌರವ ಸಲ್ಲಿಸಲು ತಾನು ಈ ಕೆಲಸ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.