ರೈಲ್ವೆ ಸೆಲೆಕ್ಷನ್ ಪರೀಕ್ಷೆಯನ್ನು ಬರೆಯುವುದಕ್ಕಾಗಿ ಸುಭ್ರದ್ರಾ ಎಂಬುವವರು ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದಿದ್ದರು. ವಿಮಾನ ನಿಲ್ದಾಣದಿಂದ ಎಸ್ಟೀಂ ಮಾಲ್ ಗೆ ವಜ್ರ ಬಸ್ ನಲ್ಲಿ ಬಂದಿದ್ದ ಆಕೆ ಬ್ಯಾಗ್ ನ್ನು ಮರೆತಿದ್ದರು. ಬಸ್ ನಿರ್ವಾಹಕ ಯೆಲ್ಲಪ್ಪ ಬಟಗೇರಿ ಹಾಗೂ ಚಾಲಕ ಶಿವಕುಮಾರ್ ಗೆ ಈ ಮಾಹಿತಿ ಡಿಪೋ ಇಂದ ಗೊತ್ತಾಗಿದೆ. ಅದನ್ನು ಮಹಿಳೆಗೆ ತಲುಪಿಸಿದ್ದು, ಪ್ರಾಮಾಣಿಕತೆ ಮೆರೆದಿದ್ದಾರೆ. ಸಮಯಕ್ಕೆ ಸರಿಯಾಗಿ ಬ್ಯಾಗ್ ನ್ನು ತಲುಪಿಸಿರುವ ಚಾಲಕ, ನಿರ್ವಾಹಕರಿಗೆ ಮಹಿಳೆ ಧನ್ಯವಾದ ತಿಳಿಸಿದ್ದಾರೆ.