ಗೀತಾ ಮೆಹ್ತಾ ಅವರ ಸಾಹಿತ್ಯ ಸೇವೆಗಾಗಿ ಕೇಂದ್ರ ಸರ್ಕಾರ ಶುಕ್ರವಾರವಷ್ಟೇ ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. ''ಪದ್ಮಶ್ರೀ ಪ್ರಶಸ್ತಿಗೆ ನನ್ನನ್ನು ಅರ್ಹ ಎಂದು ಪರಿಗಣಿಸಿರುವ ಭಾರತ ಸರ್ಕಾರದ ನಡೆಗೆ ಗೌರವದಿಂದ ತಲೆಬಾಗುತ್ತೇನೆ. ಆದರೆ, ಚುನಾವಣೆ ಹೊಸ್ತಿಲಲ್ಲಿ ಆ ಪ್ರಶಸ್ತಿ ಸ್ವೀಕರಿಸುವುದು ವೈಯಕ್ತಿಕವಾಗಿ ನನಗೆ ಮುಜುಗರ ಉಂಟು ಮಾಡುತ್ತದೆ. ಸರ್ಕಾರಕ್ಕೂ ಅದು ಇಕ್ಕಟ್ಟು ಸೃಷ್ಟಿಸಬಲ್ಲದು. ಆದ್ದರಿಂದ ವಿನಮ್ರವಾಗಿಯೇ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ ಎಂದು ಮೆಹ್ತಾ ಶನಿವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.