ಇಂದು ಬಿಜೆಪಿ ಪರ ಸರ್ಕಾರಿ ನೌಕರರ ಸಂಘಟನೆ ತ್ರಿಪುರ ರಾಜ್ಯ ಕರ್ಮಚಾರಿ ಸಂಘದ ಎರಡನೇ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ತ್ರಿಪುರಾ ಸಿಎಂ, ಬಿಜೆಪಿ ಸರ್ಕಾರದಲ್ಲಿ ರಾಜ್ಯ ಸರ್ಕಾರಿ ನೌಕರರು ಅತಿ ಹೆಚ್ಚು ವೇತನ ಪಡೆಯುತ್ತಿದ್ದಾರೆ. ಆದರೂ ನೌಕರರು ಪ್ರಾಮಾಣಿಕವಾಗಿ ಸಮರ್ಥವಾಗಿ ಕೆಲಸ ಮಾಡದಿರುವುದು ಕಂಡುಬಂದರೆ ಅವರಿಗೆ ಕಡ್ಡಾಯ ನಿವೃತ್ತಿ ನೀಡಲಾಗುವುದು ಎಂದರು.