ತಾವು ಎಂದಿಗೂ ರಾಮಮಂದಿರ ವಿವಾದವನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡಿಲ್ಲ, ಮತಯಾಚಿಸಿಲ್ಲ ಎಂದ ಅವರು, ರಾಮಮಂದಿರ ನಿರ್ಮಿಸಬೇಕೆ ಬೇಡವೇ ಎಂಬುದು ಬಿಜೆಪಿಗೆ ಬಿಟ್ಟ ವಿಚಾರ. ಶಿವಸೇನೆ ಬಿಜೆಪಿ ಮಿತ್ರ ಪಕ್ಷವಷ್ಟೇ. ಈ ವಿಷಯದಲ್ಲಿ ತಾವು ಹೇಳುವುದೇನು ಇಲ್ಲ. ಆದರೆ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ದೇಶದ ಜನರು ಬಯಸುವ ಕೆಲಸವನ್ನೇ ಮಾಡುತ್ತಾರೆ. ಆದ್ದರಿಂದ ರಾಮಮಂದಿರ ನಿರ್ಮಾಣವಾಗೇ ತೀರುತ್ತದೆ ಎಂದರು.