ಜೈಪುರ: ಧಾರ್ಮಿಕ ಕಾರ್ಯಕ್ರಮದ ವೇಳೆ ಬಿರುಗಾಳಿಯಿಂದ ಟೆಂಟ್ ಕುಸಿದು 15 ಮಂದಿ ದುರ್ಮರಣ ಹೊಂದಿ, 50 ಮಂದಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಬರ್ಮೇರೆ ಜಿಲ್ಲೆಯಲ್ಲಿ ನಡೆದಿದೆ
ಜಸೋಲ್ ಗ್ರಾಮದಲ್ಲಿ ಈ ದುರಂತ ನಡೆದಿದ್ದು, ರಾಮಕಥ ಕೇಳಲು ನೆರೆದಿದ್ದ ಜನರ ಮೇಲೆ ಟೆಂಟ್ ಕುಸಿದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೆಲ ಸಮಯದ ನಂತರ ಸಾವಿಗೀಡಾದವರ ನಿಖರ ಮಾಹಿತಿ ತಿಳಿದುಬರಲಿದೆ. ಜನದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಗಾಯಾಗಳುಗಳಿಗೆ ಚಿಕಿತ್ಸೆ ನೀಡುವಲ್ಲಿ ಪೊಲೀಸ್ ತಂಡ ನಿರತವಾಗಿರುವುದಾಗಿ ಬಲೋತ್ರ ಸಬ್ ಇನ್ಸ್ ಪೆಕ್ಟರ್ ಖೆತಾರಾಮ್ ಹೇಳಿದ್ದಾರೆ.
ಘಟನೆ ಬಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ