ದೇಶಭಕ್ತಿ: ಏರ್ ಇಂಡಿಯಾ ಸಿಬ್ಬಂದಿಯಿಂದ 'ಜೈ ಹಿಂದ್' ಘೋಷಣೆ!

ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ಬಳಿಕ ದೇಶದ ಜನತೆಯಲ್ಲಿ ದೇಶಭಕ್ತಿ ಹೆಚ್ಚಾಗಿದ್ದು ಈ ಮಧ್ಯೆ ವಿಮಾನದ ಮಾಹಿತಿ ಪ್ರಕಟನೆ ನಂತರ ಏರ್ ಇಂಡಿಯಾ ಸಿಬ್ಬಂದಿ ಜೈ ಹಿಂದ್ ಎಂದು ಹೇಳಬೇಕಿದೆ.
ಏರ್ ಇಂಡಿಯಾ
ಏರ್ ಇಂಡಿಯಾ
ನವದೆಹಲಿ: ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ಬಳಿಕ ದೇಶದ ಜನತೆಯಲ್ಲಿ ದೇಶಭಕ್ತಿ ಹೆಚ್ಚಾಗಿದ್ದು ಈ ಮಧ್ಯೆ ವಿಮಾನದ ಮಾಹಿತಿ ಪ್ರಕಟನೆ ನಂತರ ಏರ್ ಇಂಡಿಯಾ ಸಿಬ್ಬಂದಿ ಜೈ ಹಿಂದ್ ಎಂದು ಹೇಳಬೇಕಿದೆ. 
ಹೌದು, ವಿಮಾನ ಹಾರಾಟದ ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡಿದ ಬಳಿಕ ಏರ್ ಇಂಡಿಯಾ ಸಿಬ್ಬಂದಿ ಜೈ ಹಿಂದ್ ಅಂತ ಹೇಳಬೇಕು ಎಂದು ಏರ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕ ಅಮಿತಾಬ್ ಸಿಂಗ್ ಸೂಚಿಸಿದ್ದಾರೆ.
2016ರಲ್ಲೇ ಮಾಜಿ ಏರ್ ಇಂಡಿಯಾ ಮುಖ್ಯಸ್ಥ ಅಶ್ವಿನಿ ಲೋಹನಿ ಅವರು ಪೈಲಟ್ ಗಳು ಜೈ ಹಿಂದ್ ಎಂದು ಹೇಳಬೇಕೆಂದು ಸೂಚಿಸಿದ್ದರು. ಇದೀಗ ಪ್ರತಿಯೊಬ್ಬ ಸಿಬ್ಬಂದಿ ಸಹ ಜೈ ಹಿಂದ್ ಎಂದ ಹೇಳಬೇಕು ಎಂದು ಕಾರ್ಯಕಾರಿ ನಿರ್ದೇಶಕರು ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com