ಇಂದು ಲಕಿಂಪುರ್ ಬಿಜೆಪಿ ಕಚೇರಿಯಲ್ಲಿ ಹೋಳಿ ಆಚರಿಸುತ್ತಿದ್ದ ಶಾಸಕರ ಹಾಗೂ ಕಾರ್ಯಕರ್ತರ ನಡುವ ತೀವ್ರಾ ವಾಗ್ವಾದ ನಡೆದಿದೆ. ಈ ವೇಳೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದು, ಅದು ಶಾಸಕರ ಕಾಲಿಗೆ ತಗುಲಿದೆ. ಶಾಸಕರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಅಪಾಯ ಇಲ್ಲ ಎಂದು ಲಕಿಂಪುರ್ ಜಿಲ್ಲಾಧಿಕಾರಿ ಎಸ್ ಸಿಂಗ್ ಅವರು ತಿಳಿಸಿದ್ದಾರೆ.