ಇನ್ನು ಬಾರಾಮುಲ್ಲಾದ ಮುಖ್ಯ ಚೌಕದ ಬಳಿ ಉಗ್ರರು ಓರ್ವ ನಾಗರಿಕನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ರಾಮ್ಬನ್ ಜಿಲ್ಲೆಯ ಬನಿಹಾಲ್ ನಲ್ಲಿ ಸ್ಯಾಂಟ್ರೋ ಕಾರು ಸಿಆರ್ ಪಿಎಫ್ ವಾಹನಕ್ಕೆ ಡಿಕ್ಕಿ ಹೊಡೆದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ. ರಾಮ್ಬನ್ ಜಿಲ್ಲೆಯಲ್ಲಿ ನಡೆದ ಘಟನೆಯನ್ನು ಪುಲ್ವಾಮ ಮಾದರಿಯ ವಿಫಲ ಯತ್ನ ಎಂದು ವಿಶ್ಲೇಷಿಸಲಾಗುತ್ತಿತ್ತು.