ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ ವರದಿಯಾಗಿದ್ದು, ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಇತ್ತೀಚಿನ ಮಾಹಿತಿಯ ಪ್ರಕಾರ ಈ ಘಟನೆಯಲ್ಲಿ ಯಾವುದೇ ಹಾನಿ ಅಥವಾ ಗಾಯಗಳು ಭದ್ರತಾಪಡೆಯ ಸಿಬ್ಬಂದಿಗಳಿಗೆ ಉಂಟಾಗಿಲ್ಲ. ಘಟನಾಸ್ಥಳದಲ್ಲಿ ಭದ್ರತಾಪಡೆ ಶೋಧಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾಪಡೆಗಳನ್ನು ಕರೆಸಲಾಗಿದೆ. ಯುರೋಪಿಯನ್ ಸಂಸತ್ ನ ನಿಯೋಗದ ಸದಸ್ಯರು ರಾಜ್ಯದ ಸ್ಥಿತಿಗತಿಗಳ ಬಗ್ಗೆ ವೀಕ್ಷಿಸಲು ಆಗಮಿಸಿದ ದಿನವೇ ಈ ಘಟನೆ ನಡೆದಿದೆ.
Advertisement