ಮುದ್ರಣ ಮಾಧ್ಯಮ ಪುನಶ್ಚೇತನಕ್ಕೆ ಸರ್ಕಾರ ಉತ್ತೇಜನ ಪ್ಯಾಕೇಜ್ ನೀಡಲಿ: ಸರ್ಕಾರಕ್ಕೆ ಐಎನ್ಎಸ್ ಒತ್ತಾಯ

ಕೋವಿಡ್-19 ನಿಂದ ಏಕಾಏಕಿ ಎದುರಾಗಿರುವ ಬಿಕ್ಕಟ್ಟಿನ ಮಧ್ಯೆ ಮುದ್ರಣ ಮಾಧ್ಯಮ ಉದ್ಯಮಕ್ಕೆ ಸರ್ಕಾರ ಉತ್ತೇಜನ ನೀಡಬೇಕೆಂದು ಭಾರತೀಯ ಪತ್ರಿಕೆಗಳ ಸೊಸೈಟಿ(ಐಎನ್ಎಸ್)ಒತ್ತಾಯಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕೋವಿಡ್-19 ನಿಂದ ಏಕಾಏಕಿ ಎದುರಾಗಿರುವ ಬಿಕ್ಕಟ್ಟಿನ ಮಧ್ಯೆ ಮುದ್ರಣ ಮಾಧ್ಯಮ ಉದ್ಯಮಕ್ಕೆ ಸರ್ಕಾರ ಉತ್ತೇಜನ ನೀಡಬೇಕೆಂದು ಭಾರತೀಯ ಪತ್ರಿಕೆಗಳ ಸೊಸೈಟಿ(ಐಎನ್ಎಸ್)ಒತ್ತಾಯಿಸಿದೆ.

ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿರುವ ಸೊಸೈಟಿ, ಮುದ್ರಣ ಮಾಧ್ಯಮದ ಮೇಲೆ ಇರುವ ಶೇಕಡಾ 6ರ ಸುಂಕ ತೆರಿಗೆ, ಮುದ್ರಣ ಸಂಸ್ಥೆಗಳ ಮೇಲಿನ ಎರಡು ವರ್ಷಗಳ ರಜಾ ತೆರಿಗೆ, ಬ್ಯೂರೊ ಆಫ್ ಔಟ್ ರೀಚ್ ಅಂಡ್ ಕಮ್ಯುನಿಕೇಷನ್ ನ ಜಾಹಿರಾತು ದರವನ್ನು ಶೇಕಡಾ 50ರಷ್ಟು ಹೆಚ್ಚಿಸುವುದು ಮತ್ತು ಮುದ್ರಣ ಮಾಧ್ಯಮಗಳ ಬಜೆಟ್ ವೆಚ್ಚವನ್ನು ಶೇಕಡಾ 100ರಷ್ಟು ಹೆಚ್ಚಿಸುವಂತೆ ಕೋರಿದೆ.

ಬಿಒಸಿ ಮತ್ತು ಇತರ ರಾಜ್ಯ ಸರ್ಕಾರಗಳಿಂದ ಜಾಹಿರಾತುಗಳಿಂದ ಬರಬೇಕಾಗಿರುವ ಹಣವನ್ನು ಕೇಂದ್ರ ಸರ್ಕಾರ ಶೀಘ್ರವೇ ಬಿಡುಗಡೆಗೊಳಿಸುವಂತೆ ಕೋರಿದೆ. ಮುದ್ರಣ ಮಾಧ್ಯಮಕ್ಕೆ ತೀವ್ರ ಹೊಡೆತ ಬಿದ್ದಿದ್ದು  ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ನೆರವಿಗೆ ಬರಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com