ನವದೆಹಲಿ:ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್ ಶರ್ಮಾ ಅವರನ್ನು ಕೊಲೆ ಮಾಡಿದದ್ದು ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ಕಾರ್ಪೋರೇಟರ್ ತಹಿರ್ ಹುಸೇನ್ ಎಂದು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಆರೋಪಿಸಿದ್ದಾರೆ.
ಈಶಾನ್ಯ ದೆಹಲಿಯ ಚಾಂದ್ ಬಾಗ್ ಪ್ರದೇಶದ ಚರಂಡಿಯೊಂದರಲ್ಲಿ ಅಂಕಿತ್ ಶರ್ಮಾ ಅವರ ಮೃತದೇಹ ಬುಧವಾರ ಪತ್ತೆಯಾಗಿತ್ತು.ಹುಸೇನ್ ನಿರಂತರವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಸಂಪರ್ಕದಲ್ಲಿರುವುದಾಗಿ ಕಪಿಲ್ ಮಿಶ್ರಾ ಆರೋಪಿಸಿದ್ದಾರೆ.
ಅಂಕಿತ್ ಶರ್ಮಾ ಕೊಲೆ ಮಾಡಿರುವ ತಹೀರ್ ಹುಸೇನ್ ಅಂಕಿತ್ ಶರ್ಮಾ ಮಾತ್ರವಲ್ಲದೇ ಇತರ ನಾಲ್ವರು ಯುವಕರನ್ನು ಹತ್ಯೆ ಮಾಡಿದ್ದಾರೆ. ಈ ಪೈಕಿ ಮೂವರು ಮೃತಪಟ್ಟಿದ್ದಾರೆ. ಮುಸುಕು ಧರಿಸಿರುವ ಯುವಕರೊಂದಿಗೆ ದೊಣ್ಣೆ, ಕಲ್ಲು, ಬುಲೆಟ್ ಮತ್ತು ಪೆಟ್ರೋಲ್ ಬಾಂಬ್ ಗಳೊಂದಿಗೆ ತಹೀರ್ ಹುಸೇನ್ ಇರುವ ವಿಡಿಯೋ ಇದೆ. ಕೇಜ್ರಿವಾಲ್ ಹಾಗೂ ಎಎಪಿ ಮುಖಂಡರೊಂದಿಗೆ ಹುಸೇನ್ ನಿರಂತರವಾಗಿ ಮಾತನಾಡುತ್ತಿರುತ್ತಾನೆ ಎಂದು ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದಾರೆ.
ಚಾಂದ್ ಬಾಗ್ ನಲ್ಲಿ ತಹೀರ್ ಹುಸೇನ್ ಕಟ್ಟಡದಿಂದ ಕೆಲವರು ಕಲ್ಲು ತೂರಾಟ ನಡೆಸಿದ್ದರು ಎಂದು ಅಂಕಿತ್ ಶರ್ಮಾ ಅವರ ಕುಟುಂಬ ಸದಸ್ಯರು ಕೂಡಾ ನಿನ್ನೆ ದಿನ ಆರೋಪಿಸಿದ್ದರು. ಕರ್ತವ್ಯ ಮುಗಿಸಿ ವಾಪಾಸ್ ಆಗುತ್ತಿದ್ದಾಗ ಅಂಕಿತ್ ಮೇಲೆ ದಾಳಿ ನಡೆಸಲಾಗಿದೆ ಎಂದು ಅಂಕಿತ್ ಅವರ ತಂದೆ ರವೀಂದರ್ ಕುಮಾರ್ ಹೇಳಿದ್ದಾರೆ
Advertisement