ಬಿಡದಿ: ಭಾರತ ದೇಶ ಹಿಂದೂ ರಾಷ್ಟ್ರವೇ... ಹೊಸದಾಗಿ ಬಿಜೆಪಿಯವರೇನು ಮಾಡಬೇಕಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಫೆ.27 ರಂದು ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಭಾರತ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕಿಲ್ಲ. ಭಾರತ ಹಿಂದೂ ರಾಷ್ಟ್ರವೇ ಎಂದು ಹೇಳಿದ್ದಾರೆ.
ಇದೇ ವೇಳೆ ದೆಹಲಿಯಲ್ಲಿ ನಡೆದಿರುವ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ದೆಹಲಿಯಲ್ಲಿ ನಡೆದಿರುವುದು ಬಿಜೆಪಿ ನಾಯಕರಿಂದ ನಡೆದಿರುವ ಗಲಭೆ ಒಂದು ಕಡೆ ಟ್ರಂಪ್ ಕರೆದುಕೊಂಡು ಬಂದು ಗುಜರಾತ್ನಲ್ಲಿ ಮೆರವಣಿಗೆ ಮಾಡ್ತಾರೆ, ಮತ್ತೊಂದೆಡೆ ದೆಹಲಿಯಲ್ಲಿ ಗಲಭೆಯೂ ನಡೆಯುತ್ತೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.
ಕಾಲಕ್ರಮೇಣ ಬದಲಾದಂತೆ ಜನ ಅರ್ಥ ಮಾಡಿಕೊಳ್ತಾರೆ ಎಂದು ಬಿಡದಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನುಡಿದರು.
Advertisement