ಭಾರತ ಹಿಂದೂ ರಾಷ್ಟ್ರವೇ... ಹೊಸದಾಗಿ ಬಿಜೆಪಿಯವರು ಮಾಡಬೇಕಿಲ್ಲ: ಕುಮಾರಸ್ವಾಮಿ 

ಭಾರತ ದೇಶ ಹಿಂದೂ ರಾಷ್ಟ್ರವೇ... ಹೊಸದಾಗಿ ಬಿಜೆಪಿಯವರೇನು ಮಾಡಬೇಕಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. 
ಭಾರತ ಹಿಂದೂ ರಾಷ್ಟ್ರವೇ... ಹೊಸದಾಗಿ ಬಿಜೆಪಿಯವರು ಮಾಡಬೇಕಿಲ್ಲ: ಕುಮಾರಸ್ವಾಮಿ
ಭಾರತ ಹಿಂದೂ ರಾಷ್ಟ್ರವೇ... ಹೊಸದಾಗಿ ಬಿಜೆಪಿಯವರು ಮಾಡಬೇಕಿಲ್ಲ: ಕುಮಾರಸ್ವಾಮಿ
Updated on

ಬಿಡದಿ: ಭಾರತ ದೇಶ ಹಿಂದೂ ರಾಷ್ಟ್ರವೇ... ಹೊಸದಾಗಿ ಬಿಜೆಪಿಯವರೇನು ಮಾಡಬೇಕಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. 

ಫೆ.27 ರಂದು ಬಿಡದಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಭಾರತ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕಿಲ್ಲ. ಭಾರತ ಹಿಂದೂ ರಾಷ್ಟ್ರವೇ ಎಂದು ಹೇಳಿದ್ದಾರೆ.

ಇದೇ ವೇಳೆ ದೆಹಲಿಯಲ್ಲಿ ನಡೆದಿರುವ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ದೆಹಲಿಯಲ್ಲಿ ನಡೆದಿರುವುದು ಬಿಜೆಪಿ ನಾಯಕರಿಂದ ನಡೆದಿರುವ ಗಲಭೆ ಒಂದು ಕಡೆ ಟ್ರಂಪ್​ ಕರೆದುಕೊಂಡು ಬಂದು ಗುಜರಾತ್​ನಲ್ಲಿ ಮೆರವಣಿಗೆ ಮಾಡ್ತಾರೆ, ಮತ್ತೊಂದೆಡೆ ದೆಹಲಿಯಲ್ಲಿ ಗಲಭೆಯೂ ನಡೆಯುತ್ತೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.

ಕಾಲಕ್ರಮೇಣ ಬದಲಾದಂತೆ ಜನ ಅರ್ಥ ಮಾಡಿಕೊಳ್ತಾರೆ ಎಂದು ಬಿಡದಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನುಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com