ಮುಂಬಯಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆಯಲ್ಲ, ಅದು ಕೊಲೆ ಎಂದು ಬಿಜೆಪಿ ಸಂಸದ ಸುಬ್ರಮಣಿನ ಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸ್ವಾಮಿ, ಸುಶಾಂತ್ ಸಾವು ಕೊಲೆ ಎಂದು ಹೇಳಲು ಹಲವು ಕಾರಣ ನೀಡಿದ್ದಾರೆ. ಇದರ ಜೊತೆಗೆ ಟ್ವೀಟ್ ನಲ್ಲಿ 26 ಅಂಶಗಳಿರುವ ಪೋಟೋ ಹಾಕಿದ್ದಾರೆ.
ಸುಶಾಂತ್ ಕತ್ತಿನ ಭಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡ ಯಾವುದೇ ಗುರುತು ಇರಲಿಲ್ಲ, ಬದಲಿಗೆ ಹತ್ಯೆ ಮಾಡಿದ್ದ ಗುರುತು ಇತ್ತು ಎಂದು ಸ್ವಾಮಿ ಹೇಳಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವವರ ಕಾಲ ಕೆಳಗೆ ಒಂದು ಚೇರ್ ಇತ್ತು, ಯಾರೋ ಸುಶಾಂತ್ ನನ್ನು ನೇಣಿಗೇರಿಸಿ ನಂತರ ಆ ಟೇಬಲ್ ಅನ್ನು ಆತನ ಕಾಲ ಕೆಳಗೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.
ಜೊತೆಗೆ ಆತನ ದೇಹದ ಮೇಲೆ ಥಳಿಸಿರುವ ಗುರುತುಗಳಿಗೆ ಎಂದು ಹೇಳಿದ್ದಾರೆ, ಈ ಸಂಬಂಧ ಬಿಹಾರ ಸಿಎಂ ನಿತೀಶ್ ಕುಮಾರ್ ಜೊತೆ ಮಾತನಾಡಿ ಪ್ರಕರಣವನ್ನು ಸಿಬಿಐಗೆ ವಹಿಸಲು ಕೋರುವುದಾಗಿ ತಿಳಿಸಿದ್ದಾರೆ.
Advertisement