ಲಡಾಖ್ ಲಡಾಯಿ: ಸತತ 3 ನೇ ದಿನ ಭಾರತ-ಚೀನಾ ಸೇನಾ ಮಾತುಕತೆ

ಈಶಾನ್ಯ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ನಡಿದ್ದ ಸಂಘರ್ಷ ಪರಿಸ್ಥಿತಿಯನ್ನು ತಿಳಿಗೊಳಿಸಿ, ಸಹಜ ಸ್ಥಿತಿಗೆ ತರಲು ಭಾರತ-ಚೀನಾ ನಡುವೆ ಸತತ 3 ನೇ ದಿನ ಸೇನಾಧಿಕಾರಿಗಳ ಮಾತುಕತೆ ನಡೆದಿದೆ. 
ಭಾರತ-ಚೀನಾ ಸೇನಾ ಮಾತುಕತೆ (ಸಂಗ್ರಹ ಚಿತ್ರ)
ಭಾರತ-ಚೀನಾ ಸೇನಾ ಮಾತುಕತೆ (ಸಂಗ್ರಹ ಚಿತ್ರ)
Updated on

ಲಡಾಖ್: ಈಶಾನ್ಯ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ನಡಿದ್ದ ಸಂಘರ್ಷ ಪರಿಸ್ಥಿತಿಯನ್ನು ತಿಳಿಗೊಳಿಸಿ, ಸಹಜ ಸ್ಥಿತಿಗೆ ತರಲು ಭಾರತ-ಚೀನಾ ನಡುವೆ ಸತತ 3 ನೇ ದಿನ ಸೇನಾಧಿಕಾರಿಗಳ ಮಾತುಕತೆ ನಡೆದಿದೆ. ಉಭಯ ಸೇನೆಯಲ್ಲಿರುವ ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಗಳು ಸಭೆ ನಡೆಸಿದ್ದು ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದರ ಬಗ್ಗೆ ಚರ್ಚಿಸಿದ್ದಾರೆ.

ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೇನೆ ನಡುವೆ ಘರ್ಷಣೆ ಉಂಟಾಗಿ ಜೂ.15 ರಂದು ಭಾರತದ ಕರ್ನಲ್ ಹಾಗೂ 19 ಯೋಧರು ಹುತಾತ್ಮರಾಗಿದ್ದರು. 18 ಯೋಧರು ತೀವ್ರವಾಗಿ ಗಾಯಗೊಂಡಿದ್ದರು.

ಜೂ.16 (ಮಂಗಳವಾರ) ಜೂ.-17 (ಬುಧವಾರ)ವೂ ಭಾರತ-ಚೀನಾ ನಡುವೆ ಮಾತುಕತೆ ನಡೆದಿತ್ತು. ಬುಧವಾರದಂದು ನಡೆದ ಚರ್ಚೆಯಲ್ಲಿ ಗಾಲ್ವಾನ್ ಕಣಿವೆಯಿಂದ ಸೇನಾಪಡೆಗಳನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗಿತ್ತು. ನೆನ್ನೆ ಈ ಬಗ್ಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ "ಭಾರತ ಶಾಂತಿ ಬಯಸುತ್ತದೆ. ಆದರೆ ಪ್ರಚೋದಿಸಿದರೆ ತಕ್ಕ ಪ್ರತಿ ಉತ್ತರ ನೀಡುವ ಶಕ್ತಿಯನ್ನೂ ಹೊಂದಿದೆ ಎಂದು ಹೇಳಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com