ರಾಜ್ಯಸಭೆ ಕಲಾಪ ನುಂಗಿದ ದೆಹಲಿ ಹಿಂಸಾಚಾರ ಗದ್ದಲ, ಕಲಾಪ ನಾಳೆಗೆ ಮುಂದೂಡಿಕೆ

ಕಳೆದ ಮೂರು ದಿನಗಳಿಂದ ಸಂಸತ್ ಕಲಾದಲ್ಲಿ ಭಾರಿ ಸದ್ದು ಮಾಡುತ್ತಿರುವ ದೆಹಲಿ ಹಿಂಸಾಚಾರ ಪ್ರಕರಣ ಬುಧವಾರ ಇಡೀ ರಾಜ್ಯಸಭೆ ಕಲಾಪವನ್ನು ನುಂಗಿ ಹಾಕಿದ್ದು, ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ರಾಜ್ಯಸಭೆ ಕಲಾಪ ಮುಂದೂಡಿಕೆ
ರಾಜ್ಯಸಭೆ ಕಲಾಪ ಮುಂದೂಡಿಕೆ
Updated on

ನವದೆಹಲಿ: ಕಳೆದ ಮೂರು ದಿನಗಳಿಂದ ಸಂಸತ್ ಕಲಾದಲ್ಲಿ ಭಾರಿ ಸದ್ದು ಮಾಡುತ್ತಿರುವ ದೆಹಲಿ ಹಿಂಸಾಚಾರ ಪ್ರಕರಣ ಬುಧವಾರ ಇಡೀ ರಾಜ್ಯಸಭೆ ಕಲಾಪವನ್ನು ನುಂಗಿ ಹಾಕಿದ್ದು, ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ಇಂದು ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿಪಕ್ಷಗಳು ದೆಹಲಿ ಹಿಂಸಾಚಾರ ಪ್ರಕರಣ ಸಂಬಂಧ ಚರ್ಚೆ ನಡೆಸಲು ಅವಕಾಶ ನೀಡುವಂತೆ ಬಿಗಿ ಪಟ್ಟು ಹಿಡಿದವು. ಈ ವೇಳೆ ರಾಜ್ಯಸಭಾ ಸ್ಪೀಕರ್ ವೆಂಕಯ್ಯನಾಯ್ಡು ಅವರು ಶೂನ್ಯ ವೇಳೆ ಅವಕಾಶ ನೀಡುವುದಾಗಿ ಭರವಸೆ ನೀಡಿದರೂ ಒಪ್ಪದ ವಿಪಕ್ಷ ಸದಸ್ಯರು ಗದ್ದಲ ಆರಂಭಿಸಿದರು. ವೆಂಕಯ್ಯನಾಯ್ಡು ಅವರು ಸದಸ್ಯರನ್ನು ಶಾಂತಗೊಳಿಸಲು ಎಷ್ಟೇ ಪ್ರಯತ್ನ ಪಟ್ಟರು ಪಟ್ಟು ಬಿಡದ ವಿಪಕ್ಷ ಸದಸ್ಯರು ಕೇಂದ್ರ ಸರ್ಕಾರ ಮತ್ತು ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.

ಹೀಗಾಗಿ ಅನಿವಾರ್ಯವಾಗಿ ಸ್ಪೀಕರ್ ವೆಂಕಯ್ಯ ನಾಯ್ಡು ಅವರು ಕಲಾಪವನ್ನು ನಾಳೆಗೆ ಮುಂದೂಡಿದರು. ಇನ್ನು ನಿನ್ನೆಯೂ ಕೂಡ ರಾಜ್ಯಸಭೆ ಕಲಾಪ ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಬಲಿಯಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com