ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ಭೋಪಾಲ್ ತಲುಪಿದ ಕಾಂಗ್ರೆಸ್ ಶಾಸಕರು

ಮಧ್ಯಪ್ರದೇಶದ ರಾಜ್ಯಪಾಲರು ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಬಹುಮತ ಸಾಬೀತಪಡಿಸುವಂತೆ ನಿರ್ದೇಶನ ನೀಡಿರುವ ಬೆನ್ನಲ್ಲೇ ರೆಸಾರ್ಟ್'ಗಳಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು, ಭಾನುವಾರ ಭೂಪಾಲ್'ಗೆ ಮರಳಿದ್ದಾರೆ. 
ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ಭೋಪಾಲ್ ತಲುಪಿದ ಕಾಂಗ್ರೆಸ್ ಶಾಸಕರು
ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ಭೋಪಾಲ್ ತಲುಪಿದ ಕಾಂಗ್ರೆಸ್ ಶಾಸಕರು
Updated on

ಭೋಪಾಲ್: ಮಧ್ಯಪ್ರದೇಶದ ರಾಜ್ಯಪಾಲರು ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಬಹುಮತ ಸಾಬೀತಪಡಿಸುವಂತೆ ನಿರ್ದೇಶನ ನೀಡಿರುವ ಬೆನ್ನಲ್ಲೇ ರೆಸಾರ್ಟ್'ಗಳಲ್ಲಿ ತಂಗಿದ್ದ ಕಾಂಗ್ರೆಸ್ ಶಾಸಕರು, ಭಾನುವಾರ ಭೂಪಾಲ್'ಗೆ ಮರಳಿದ್ದಾರೆ. 

ತೀವ್ರ ಭದ್ರತೆ ಮೂಲಕ ಜೈಪುರ ರೆಸಾರ್ಟ್ ನಿಂದ ಕಾಂಗ್ರೆಸ್ ಶಾಸಕರು ಭೋಪಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಇದೀಗ ಭೋಪಾಲ್'ನ ಕೆಲ ಪ್ರದೇಶಗಳಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. 

ಕಾಂಗ್ರೆಸ್ ಹಿರಿಯ ನಾಯಕ ಹರೀಶ್ ರಾವತ್ ಜೊತೆಗೆ ಬಂದಿರುವ ಎಲ್ಲಾ ಕಾಂಗ್ರೆಸ್ ನಾಯಕರು ವಿಶ್ವಾಸ ಮತದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಬಿಜೆಪಿಗೆ ವಿಶ್ವಾಸಮತದಿಂದ ಭಯ ಶುರುವಾಗಿದೆ. ವಿಶ್ವಾಸಮತಕ್ಕೆ ನಾವು ಸಿದ್ಧರಿದ್ದೇವೆ. ಗೆಲ್ಲುವ ವಿಶ್ವಾಸ ಕೂಡ ನಮಗಿದೆ ಎಂದು ರಾವತ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com