ಮಂಗಳೂರು: ದೇಶಾದ್ಯಂತ ಕೊರೋನಾ ವೈರಾಣು ಹರಡುವಿಕೆ ಹೆಚ್ಚಾಗುತ್ತಿದ್ದು, ದುಬೈ-ಮಂಗಳೂರು ವಿಮಾನದಲ್ಲಿ ಪ್ರಯಾಣಿಸಿದ್ದ ಓರ್ವ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ.
ಮಾ.14 ರಂದು ದುಬೈ ನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು, ಆತನೊಂದಿಗೆ ಪ್ರಯಾಣಿಸಿದ್ದ 90 ಪ್ರಯಾಣಿಕರು ಸ್ವಯಂ ನಿರ್ಬಂಧದಲ್ಲಿದ್ದು ಮನೆಯಲ್ಲಿ ಉಳಿದಿದ್ದಾರೆ.
ಸೋಂಕು ಪತ್ತೆಯಾಗಿರುವ ವ್ಯಕ್ತಿ ಕೇರಳದವರಾಗಿದ್ದು, ಕಾಸರಗೋಡಿಗೆ ತೆರಳಿದ್ದರು. ತಕ್ಷಣವೇ ಎಚ್ಚೆತ್ತುಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲಾಡಳಿತದ ಅಧಿಕಾರಿಗಳು ಕಾಸರಗೋಡಿನ ಅಧಿಕಾರಿಗಳನ್ನು ಸಂಪರ್ಕಿಸಿ, ಸೋಂಕು ತಗುಲಿದ್ದ ವ್ಯಕ್ತಿ ಕಾಸರಗೋಡಿಗೆ ತಲುಪುವುದಕ್ಕೂ ಮುನ್ನ ಸಂಚರಿಸಿದ್ದ ಸ್ಥಳ ಸಂಪರ್ಕಿಸಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆದಿದ್ದರು.
ಸೋಂಕು ತಗುಲಿದ್ದ ವ್ಯಕ್ತಿ ಮಂಗಳೂರಿನಿಂದ ಕಾಸರಗೋಡಿಗೆ ನೇರವಾಗಿ ಬಂದಿದ್ದ ಎಂಬ ಮಾಹಿತಿಯನ್ನು ಕೇರಳ ನೀಡಿತ್ತು. ಇತ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ ಸೋಂಕು ತಗುಲಿದ್ದ ವ್ಯಕ್ತಿಯೊಂದಿಗೆ ವಿಮಾನದಲ್ಲಿ ಸಂಚರಿಸಿದ್ದವರ ಬಗ್ಗೆ ಮಾಹಿತಿ ಪಡೆದು ಅವರಿಗೆ ಮನೆಯಲ್ಲಿ ಇರುವಂತೆ ನಿರ್ಬಂಧ ವಿಧಿಸಲಾಗಿದೆ.
Advertisement