ಸಾಂದರ್ಭಿಕ ಚಿತ್ರ
ದೇಶ
ಮೇಘಾಲಯದಲ್ಲಿ ವಿಷಪೂರಿತ ಅಣಬೆ ಸೇವಿಸಿ ಐವರು ಸಾವು
ಮೇಘಾಲಯದ ಪಶ್ಚಿಮ ಭಾಗದ ಪರ್ವತ ಜಿಲ್ಲೆಯಾದ ಜೈತಿಂಯಾದಲ್ಲಿ ವಿಷಪೂರಿತ ಅಣಬೆ ಸೇವಿಸಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಯಾಗಿದೆ.
ಶಿಲ್ಲಾಂಘ್: ಮೇಘಾಲಯದ ಪಶ್ಚಿಮ ಭಾಗದ ಪರ್ವತ ಜಿಲ್ಲೆಯಾದ ಜೈತಿಂಯಾದಲ್ಲಿ ವಿಷಪೂರಿತ ಅಣಬೆ ಸೇವಿಸಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಯಾಗಿದೆ.
ಸ್ಥಳೀಯವಾಗಿ ಕರೆಯಲ್ಪಡುವ ಟಿಟ್ ಬಿಸೆನ್ ಅಣಬೆ ಸೇವಿಸಿ ಅಸ್ವಸ್ಥಗೊಂಡಿದ್ದ 23 ವರ್ಷದ ಯುವಕ ಖೊಂಗ್ಲಾನನ್ನು ಈಶಾನ್ಯ ಪ್ರಾದೇಶಿಕ ಇಂದಿರಾ ಗಾಂಧಿ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಯುವಕ ಮೃತಪಟ್ಟಿದ್ದಾರೆ.ಇದರೊಂದಿಗೆ ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಭಾರತ-ಬಾಂಗ್ಲಾದೇಶ ಗಡಿಯ ಅಮ್ಲಾರೆಮ್ ಉಪ ವಿಭಾಗದ ಲಮಿನ್ ಗ್ರಾಮದ ಮೂರು ಕುಟುಂಬಗಳ 18 ಮಂದಿ ಕಾಡು ಅಣಬೆ ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ