ನವದೆಹಲಿ: ಕೊರೋನಾ ಹೋರಾಟದಲ್ಲಿ ರಾಜಕಾರಣಿಗಳು ತಮ್ಮ ಕೌಶಲ್ಯಗಳನ್ನು ಸೇವೆಗೆ ಸದುಪಯೋಗಪಡಿಸಿಕೊಂಡಿದ್ದಾರೆ. ಈ ಪೈಕಿ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿಯೂ ಒಬ್ಬರು!
ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ಓರ್ವ ಪೈಲಟ್ ಎಂಬುದು ಅನೇಕ ಜನರಿಗೆ ಗೊತ್ತಿಲ್ಲದಿರಬಹುದಾದ ಸಂಗತಿ. ಅವರ ಈ ಕೌಶಲ್ಯ ಕೋವಿಡ್-19 ವಿರುದ್ಧದ ಕಾರ್ಯಾಚರಣೆ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದೆ.
ಕೋವಿಡ್-19 ವೈದ್ಯಕೀಯ ಸಾಮಗ್ರಿಗಳಿದ್ದ ಕಾರ್ಗೋ ಫ್ಲೈಟ್ ನ್ನು ಚಾಲನೆ ಮಾಡಿ ದೆಹಲಿಯಿಂದ ಢಾಕಾಗೆ ಅವುಗಳನ್ನು ತಲುಪಿಸಿದ್ದಾರೆ ರಾಜೀವ್ ಪ್ರತಾಪ್ ರೂಡಿ. ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಕೊರೋನಾದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಭಾರತ ಅತ್ಯುತ್ತಮವಾಗಿ ನಿಭಾಯಿಸುತ್ತಿದೆ ಎಂದು ಹೇಳಿದ್ದಾರೆ.
ಮೇ.3 ರ ನಂತರ ಎರಡು ವಾರಗಳ ಕಾಲ ಲಾಕ್ ಡೌನ್ ಮುಂದುವರೆಸಿದ್ದ ಭಾರತ ಸರ್ಕಾರ, ಮೇ. 31 ವರೆಗೆ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ ವಿಧಿಸಿತ್ತು.
Advertisement