ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಕೊರೋನಾ ಸೋಂಕು ದೃಢವಾಗಿದೆ.
"ನಾನು ಕೋವಿಡ್ ಗಾಗಿ ಧನಾತ್ಮಕ ವರದಿ ಪಡೆದಿದ್ದೇನೆ. ಆದರೆ ಕಳವಳಕ್ಕೆ ಯಾವುದೇ ಕಾರಣವಿಲ್ಲ. ಆದಾಗ್ಯೂ, ಕಳೆದ ವಾರ ನವದೆಹಲಿಯಲ್ಲಿ ನನ್ನೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರಿಗೂ ಕೋವಿಡ್ ಪರೀಕ್ಷಿಸಲು ಅಥವಾ ಸುರಕ್ಷಿತವಾಗಿರಲು ನಿಗಾವಹಿಸುವಂತೆ ನಾನು ವಿನಂತಿಸುತ್ತೇನೆ" ಖಾನ್ ಟ್ವೀಟ್ ಮಾಡಿದ್ದಾರೆ.
ನವದೆಹಲಿಯಲ್ಲಿದ್ದ ರಾಜ್ಯಪಾಲರು ಶುಕ್ರವಾರ ಬೆಳಿಗ್ಗೆ ತಿರುವನಂತಪುರಂಗೆ ಮರಳಿದ್ದರು ಮತ್ತು ಶನಿವಾರ ಸ್ವತಃ ಪರೀಕ್ಷೆಗೆ ಒಳಗಾಗಿದ್ದರು ಎಂದು ರಾಜಭವನ ಮೂಲಗಳು ಹೇಳಿದೆ.
Advertisement