ಕಂಟೈನ್‌ಮೆಂಟ್ ವಲಯದ ಹೊರಗೆ ಮಾತ್ರ ಹಬ್ಬ, ಜಾತ್ರೆಗಳಿಗೆ ಅವಕಾಶ: ಸರ್ಕಾರದ ನೂತನ ಮಾರ್ಗಸೂಚಿ!

ಮಹಾಮಾರಿ ಕೊರೋನಾ ಕಂಟೈನ್‌ಮೆಂಟ್ ವಲಯ ಬಿಟ್ಟು ಹೊರಗಡೆ ಹಬ್ಬಗಳ ಆಚರಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದಕ್ಕಾಗಿ ಕೆಲ ನಿಯಮಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ದಸರಾ
ದಸರಾ
Updated on

ನವದೆಹಲಿ: ಮಹಾಮಾರಿ ಕೊರೋನಾ ಕಂಟೈನ್‌ಮೆಂಟ್ ವಲಯ ಬಿಟ್ಟು ಹೊರಗಡೆ ಹಬ್ಬಗಳ ಆಚರಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದಕ್ಕಾಗಿ ಕೆಲ ನಿಯಮಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ. 

ಭಾರತದಲ್ಲಿ ನವೆಂಬರ್-ಡಿಸೆಂಬರ್ ನಲ್ಲಿ ಹಬ್ಬಗಳು, ಜಾತ್ರೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ನಡೆಯಲಿದ್ದು ಈ ವೇಳೆ ಅಪಾರ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ. ಹೀಗಾಗಿ ಇವುಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. 

ಮಾರ್ಗಸೂಚಿಗಳು
* ಕಾರ್ಯಕ್ರಮಗಳ ವೇಳೆ ಪರಸ್ಪರ ಆರು ಅಡಿ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ನೆಲದಲ್ಲಿ ಸೂಕ್ತ ಗುರುತುಗಳನ್ನು ಹಾಕಬೇಕು. ದೇವಸ್ತಾನಗಳಲ್ಲಿ ದೇವರ ವಿಗ್ರಹಗಳನ್ನು ಅಥವಾ ಪವಿತ್ರ ಗ್ರಂಥಗಳನ್ನು ಮಟ್ಟುವಂತಿಲ್ಲ. 

* ಕಂಟೈನ್‌ಮೆಂಟ್ ವಲಯದಲ್ಲಿ ಇರುವ ಜನರು ಮನೆಯಲ್ಲಿಯೇ ಹಬ್ಬ ಆಚರಿಸುವುದು. 

* ಜಾತ್ರೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಡುಗಾರ ತಂಡವನ್ನು ಕರೆಯುವುದಕ್ಕೆ ಅವಕಾಶವಿಲ್ಲ. 

* ಹಬ್ಬ ಆಚರಿಸುವ ಸ್ಥಳಕ್ಕೆ ಸೋಂಕಿನ ಲಕ್ಷಣವಿಲ್ಲದ ಸಿಬ್ಬಂದಿ ಮತ್ತು ಜನರಿಗಷ್ಟೇ ಅವಕಾಶ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಕಡ್ಡಾಯ.

* ಮಾಸ್ಕ್ ಧರಿಸಿದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಬೇಕು. ನಾಲ್ಕೈದು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಲ್ಲಿ ಜನದಟ್ಟಣೆ ಹೆಚ್ಚದಂತೆ ಕ್ರಮವಹಿಸಬೇಕು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com