ವಿಷಾಹಾರ ಸೇವಿಸಿ ಒಂದೇ ಕುಟುಂಬದ ಮೂವರು ಮಕ್ಕಳು ಸಾವು, ಮತ್ತಿಬ್ಬರ ಸ್ಥತಿ ಗಂಭೀರ

ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯ ಕಚೇಲಿ ಗ್ರಾಮದಲ್ಲಿ ಬಿದಿರು ಚಿಗುರು ಸೇವಿಸಿದ್ದರೆನ್ನಲಾದ ಒಂದೇ ಕುಟುಂಬದ ಮೂವರು ಮಕ್ಕಳು ಸಾವನ್ನಪ್ಪಿದ್ದು, ಗಂಭೀರ ಸ್ಥಿತಿಯಲ್ಲಿರುವ ನತದೃಷ್ಟರ ತಾಯಿ ಮತ್ತು ಮತ್ತೊಂದು ಮಗುವನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಭುವನೇಶ್ವರ: ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯ ಕಚೇಲಿ ಗ್ರಾಮದಲ್ಲಿ ಬಿದಿರು ಚಿಗುರು ಸೇವಿಸಿದ್ದರೆನ್ನಲಾದ ಒಂದೇ ಕುಟುಂಬದ ಮೂವರು ಮಕ್ಕಳು ಸಾವನ್ನಪ್ಪಿದ್ದು, ಗಂಭೀರ ಸ್ಥಿತಿಯಲ್ಲಿರುವ ನತದೃಷ್ಟರ ತಾಯಿ ಮತ್ತು ಮತ್ತೊಂದು ಮಗುವನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಮೃತ ಮೂವರು ಮಕ್ಕಳನ್ನು ಸುಕಂತಿ ಮಹ್ದಿ(12) ಆಕೆಯ ಸೋದರ ಸೀತಾರಾಮ್ (7) ಮತ್ತು ಸೋದರಿ ಅಂಜಲಿ (3) ಎಂದು ಗುರುತಿಸಲಾಗಿದೆ.

ಏಳು ಸದಸ್ಯರ ಕುಟುಂಬ ಕಳೆದ ರಾತ್ರಿ ಬಿದಿರಿನ ಚಿಗುರುಗಳನ್ನು ಸೇವಿಸಿದ ನಂತರ ತೀವ್ರ ಹೊಟ್ಟೆ ನೋವು ಮತ್ತು ಅತಿಸಾರದಿಂದ ಅಸ್ವಸ್ತರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಒಡಹುಟ್ಟಿದ ಮೂವರು ಮಕ್ಕಳು ಸಾವನ್ನಪ್ಪಿದ್ದರೆ, ತಾಯಿ ಮತ್ತು ಮತ್ತೊಬ್ಬ ಮಗು ಗಂಭೀರ ಸ್ಥಿತಿಯಲ್ಲಿದ್ದು ಮಲ್ಕನ್ ಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ಇನ್ನಿಬ್ಬರು ಆರೋಗ್ಯದಿಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com