ಟಿಆರ್‌ಪಿ ಹಗರಣ: ನಿಮ್ಮ ಕಚೇರಿ ಮುಂಬೈ ಹೈಕೋರ್ಟ್ ಸಮೀಪದಲ್ಲೇ ಇದೆ; ರಿಪಬ್ಲಿಕ್ ಟಿವಿ ಅರ್ಜಿ ವಜಾಗೊಳಿಸಿದ 'ಸುಪ್ರೀಂ'

ಟಿಆರ್‌ಪಿ ಹಗರಣದ ಕುರಿತು ಮುಂಬೈ ಪೊಲೀಸ್ ತನಿಖೆಯನ್ನು ಪ್ರಶ್ನಿಸಿ ರಿಪಬ್ಲಿಕ್ ಟಿವಿ ಸಲ್ಲಿಸಿದ್ದ ಮನವಿಯನ್ನು  ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಟಿಆರ್‌ಪಿ ಹಗರಣ: ನಿಮ್ಮ ಕಚೇರಿ ಮುಂಬೈ ಹೈಕೋರ್ಟ್ ಸಮೀಪದಲ್ಲೇ ಇದೆ; ರಿಪಬ್ಲಿಕ್ ಟಿವಿ ಅರ್ಜಿ ವಜಾಗೊಳಿಸಿದ 'ಸುಪ್ರೀಂ'
Updated on

ನವದೆಹಲಿ: ಟಿಆರ್‌ಪಿ ಹಗರಣದ ಕುರಿತು ಮುಂಬೈ ಪೊಲೀಸ್ ತನಿಖೆಯನ್ನು ಪ್ರಶ್ನಿಸಿ ರಿಪಬ್ಲಿಕ್ ಟಿವಿ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಸುಪ್ರೀಂ ಕೋರ್ಟ್ ಅನ್ನು ಕೇಳುವ ಮೊದಲು ಬಾಂಬೆ ಹೈಕೋರ್ಟ್ ಅನ್ನು ಮೊದಲು ಸಂಪರ್ಕಿಸಬೇಕು ಎಂದು ಚಾನಲ್ ಗೆ ಸೂಚಿಸಿದೆ.

“ನಿಮ್ಮ ಕಚೇರಿ ಮುಂಬೈ ವರ್ಲಿಯಲ್ಲಿದೆ. ವರ್ಲಿಯಿಂದ ಫ್ಲೋರಾ ಫೌಂಟೇನ್ (ಬಾಂಬೆ ಹೈಕೋರ್ಟ್ ಇರುವ ಸ್ಥಳ) ಹತ್ತಿರದಲ್ಲಿದೆ.  ಹಾಗಾಗಿ ನಿಮಗೆ ನಮ್ಮ ಹೈಕೋರ್ಟ್‌ಗಳಲ್ಲಿ ನಮಗೆ ನಂಬಿಕೆ ಇರಬೇಕು ”ಎಂದು ನ್ಯಾಯಮೂರ್ತಿ ಚಂದ್ರಚೂಡ ಹೇಳಿದ್ದಾರೆ.

ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು ಪತ್ರಿಕೆಗಳಿಗೆ ಹೇಳಿಕೆನೀಡುವ ಪ್ರವೃತ್ತಿಯನ್ನು ಸಹ ಖಂಡಿಸಿದರು. "ಈ ದಿನಗಳಲ್ಲಿ ಪೊಲೀಸ್ ಆಯುಕ್ತರು ಪತ್ರಿಕಾಗೋಷ್ಠಿ ನೀಡುವ ಬಗ್ಗೆ ನಾವು ಸಹ ನಾವು ಗಮನಿಸಬೇಕು" ಎಂದು ನ್ಯಾಯಮೂರ್ತಿ ಚಂದ್ರಚೂಡ ಹೇಳಿದ್ದಾರೆ.

ಹಿರಿಯ ವಕೀಲ ಹರೀಶ್ ಸಾಳ್ವೆ ನ್ಯಾಯಾಲಯವು ಅನುಮತಿಸದ ಮನವಿ ಹಿಂಪಡೆಯಲು ಒಪ್ಪಿದ್ದಾರೆ. ಸಂವಿಧಾನದ 19 ನೇ ಪರಿಚ್ಚೇಧದ  ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಪರಾಧಗಳನ್ನು ಮಾಡಲು ಮತ್ತು ಅಪರಾಧದ ತನಿಖೆಯನ್ನು ತಡೆಯಲು  ಆಯುಧವನ್ನಾಗಿ ಬಳಸುವುದಿಲ್ಲ ಎಂಬ  ಮನವಿಯನ್ನು ವಿರೋಧಿಸಿ ಮುಂಬೈ ಪೊಲೀಸರು ಅಫಿಡವಿಟ್ ಸಲ್ಲಿಸಿದ್ದರು.

ರಿಪಬ್ಲಿಕ್ ಟಿವಿ ಹಗರಣದ ಬಗ್ಗೆಟಿವಿ ಡಿಬೇಟ್ ಗಳನ್ನು ನಡೆಸುತ್ತಿದೆ ಮತ್ತು ಸಾಕ್ಷಿಗಳನ್ನು ಸಂಪರ್ಕಿಸಿ ಬೆದರಿಸುತ್ತಿದೆ ಎಂದು ಅಫಿಡವಿಟ್ ನಲ್ಲಿ ತಿಳಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com