ಶಿವರಾಜ್ ಸಿಂಗ್ ಚೌಹ್ಹಾಣ್, ಕಮಲ್ ನಾಥ್ ಕಾಲಿನ ದೂಳಿಗೂ ಸಮಾನರಲ್ಲ- ಕಾಂಗ್ರೆಸ್ ಶಾಸಕ

 ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್, ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರ ಕಾಲಿನ ದೂಳಿಗೂ ಸಹ ಯೋಗ್ಯರಲ್ಲ ಎಂದು ಕಾಂಗ್ರೆಸ್ ಶಾಸಕ ಜಿತು ಪತ್ವಾರಿ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕ ಜಿತು ಪತ್ವಾರಿ
ಕಾಂಗ್ರೆಸ್ ಶಾಸಕ ಜಿತು ಪತ್ವಾರಿ
Updated on

ಖಾಂದ್ವಾ: ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್, ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರ ಕಾಲಿನ ದೂಳಿಗೂ ಸಹ ಯೋಗ್ಯರಲ್ಲ ಎಂದು ಕಾಂಗ್ರೆಸ್ ಶಾಸಕ ಜಿತು ಪತ್ವಾರಿ ಹೇಳಿದ್ದಾರೆ.

ಖಾಂದ್ವಾ ಜಿಲ್ಲೆಯ ಮಾಂಧತದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ ಪತ್ವಾರಿ,  ಅನಿಲ್ , ಮುಖೇಶ್ ಅಂಬಾನಿ, ರತನ್ ಟಾಟಾ ಅವರಂತಹ ದೊಡ್ಡ ಉದ್ಯಮಿಗಳು ಹೆಸರು ಕೇಳಿದ್ದೇವೆ.  ಅಂತಹ ಉದ್ಯಮಿಗಳನ್ನು ಕಮಲ್ ನಾಥ್ ಕರೆಯುತ್ತಾರೆ. ಅದು ಕಮಲ್ ನಾಥ್ ಅವರ ವ್ಯಕ್ತಿತ್ವ. ಶಿವರಾಜ್ ಸಿಂಗ್ ಚೌಹ್ಹಾಣ್, ಕಮಲ್ ನಾಥ್ ಅವರ ಕಾಲಿನ ದೂಳಿಗೂ ಸಮಾನರಲ್ಲ ಎಂದರು.

ಆತ್ಮಪೂರ್ವಕವಾಗಿ ಹೀಗೆ ಹೇಳುತ್ತಿದ್ದೇನೆ. ಇದು ರಾಜಕಾರಣವಲ್ಲ,  ಕಮಲ್ ನಾಥ್ ಮಧ್ಯಪ್ರದೇಶವನ್ನು ಅಭಿವೃದ್ಧಿಪಡಿಸಲು ಬಯಸುತ್ತಾರೆ ಎಂದು ಪತ್ವಾರಿ ಹೇಳಿದರು.

ಈ ಹಿಂದೆ ಮಾತನಾಡಿದ್ದ ಕಾಂಗ್ರೆಸ್ ಮುಖಂಡ ದಿನೇಶ್ ಗುರ್ಜರ್, ಶಿವರಾಜ್ ಸಿಂಗ್ ಅವರಂತೆ ಬಡ ಕುಟುಂಬದಿಂದ ಕಮಲ್ ನಾಥ್ ಬಂದಿಲ್ಲ.  ಕಮಲ್ ನಾಥ್ ದೇಶದ ನಂಬರ್ 2 ಉದ್ಯಮಿ,5 ಎಕರೆ ಜಮೀನು ಹೊಂದಿದ್ದ ಶಿವರಾಜ್ ಸಿಂಗ್ ಚೌಹ್ಹಾಣ್ ಈಗ ಬಡವರ ರಕ್ತ ಕುಡಿದು ಸಾವಿರಾರು ಎಕರೆ ಜಮೀನು ಹೊಂದಿದ್ದಾರೆ ಎಂದು ಆರೋಪಿಸಿದ್ದರು.

ಮಧ್ಯಪ್ರದೇಶ ವಿಧಾನಸಭೆಯ 28 ಸ್ಥಾನಗಳಿಗೆ ನವೆಂಬರ್ 3 ರಂದು ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 10 ರಂದು ಮತ ಎಣಿಕೆ ಪ್ರಕಟವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com