ತಬ್ಲಿಘಿ ಸಭೆಯಿಂದ ಕೋವಿಡ್ ಹಲವು ಮಂದಿಗೆ ಹರಡಿತು: ರಾಜ್ಯಸಭೆಯಲ್ಲಿ ಗೃಹ ಇಲಾಖೆ

ದೆಹಲಿಯ ನಿಜಾಮುದ್ದೀನ್ ಮರ್ಕಜ್ ನ ಪ್ರದೇಶದಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಯಿಂದ ಹಲವಾರು ಮಂದಿಗೆ ಕೊರೋನಾ ಹಬ್ಬಲು ಸಾಧ್ಯವಾಯಿತು ಎಂದು ಕೇಂದ್ರ ಗೃಹ ಇಲಾಖೆ ರಾಜ್ಯಸಭೆಗೆ ತಿಳಿಸಿದೆ.
ತಬ್ಲೀಘಿ ಜಮಾತ್
ತಬ್ಲೀಘಿ ಜಮಾತ್
Updated on

ನವದೆಹಲಿ: ದೆಹಲಿಯ ನಿಜಾಮುದ್ದೀನ್ ಮರ್ಕಜ್ ನ ಪ್ರದೇಶದಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಯಿಂದ ಹಲವಾರು ಮಂದಿಗೆ ಕೊರೋನಾ ಹಬ್ಬಲು ಸಾಧ್ಯವಾಯಿತು ಎಂದು ಕೇಂದ್ರ ಗೃಹ ಇಲಾಖೆ ರಾಜ್ಯಸಭೆಗೆ ತಿಳಿಸಿದೆ.

ಸೆ.21 ರಂದು ನಡೆದ ಕಲಾಪದಲ್ಲಿ ಸದನಕ್ಕೆ ಲಿಖಿತ ಮಾಹಿತಿ ನೀಡಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ, ಮಾ.29 ರಿಂದ ದೆಹಲಿ ಪೊಲೀಸರು 233 ತಬ್ಲಿಘಿ ಜಮಾತ್ ಸದಸ್ಯರನ್ನು ಬಂಧಿಸಿದ್ದರೆ, ಸಂಘಟನೆಯ ಪ್ರಧಾನ ಕಚೇರಿಯಿಂದ 2,361 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. 

ಜಮಾತ್ ನ ಮುಖ್ಯಸ್ಥ ಮೊಹಮ್ಮದ್ ಸಾದ್ ವಿರುದ್ಧದ ತನಿಖೆ ಪ್ರಗತಿಯಲ್ಲಿದೆ ಎಂದೂ ಸದನಕ್ಕೆ ಸಚಿವರು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com