ತಬ್ಲಿಘಿ ಸಭೆಯಿಂದ ಕೋವಿಡ್ ಹಲವು ಮಂದಿಗೆ ಹರಡಿತು: ರಾಜ್ಯಸಭೆಯಲ್ಲಿ ಗೃಹ ಇಲಾಖೆ

ದೆಹಲಿಯ ನಿಜಾಮುದ್ದೀನ್ ಮರ್ಕಜ್ ನ ಪ್ರದೇಶದಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಯಿಂದ ಹಲವಾರು ಮಂದಿಗೆ ಕೊರೋನಾ ಹಬ್ಬಲು ಸಾಧ್ಯವಾಯಿತು ಎಂದು ಕೇಂದ್ರ ಗೃಹ ಇಲಾಖೆ ರಾಜ್ಯಸಭೆಗೆ ತಿಳಿಸಿದೆ.
ತಬ್ಲೀಘಿ ಜಮಾತ್
ತಬ್ಲೀಘಿ ಜಮಾತ್
Updated on

ನವದೆಹಲಿ: ದೆಹಲಿಯ ನಿಜಾಮುದ್ದೀನ್ ಮರ್ಕಜ್ ನ ಪ್ರದೇಶದಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಯಿಂದ ಹಲವಾರು ಮಂದಿಗೆ ಕೊರೋನಾ ಹಬ್ಬಲು ಸಾಧ್ಯವಾಯಿತು ಎಂದು ಕೇಂದ್ರ ಗೃಹ ಇಲಾಖೆ ರಾಜ್ಯಸಭೆಗೆ ತಿಳಿಸಿದೆ.

ಸೆ.21 ರಂದು ನಡೆದ ಕಲಾಪದಲ್ಲಿ ಸದನಕ್ಕೆ ಲಿಖಿತ ಮಾಹಿತಿ ನೀಡಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಶನ್ ರೆಡ್ಡಿ, ಮಾ.29 ರಿಂದ ದೆಹಲಿ ಪೊಲೀಸರು 233 ತಬ್ಲಿಘಿ ಜಮಾತ್ ಸದಸ್ಯರನ್ನು ಬಂಧಿಸಿದ್ದರೆ, ಸಂಘಟನೆಯ ಪ್ರಧಾನ ಕಚೇರಿಯಿಂದ 2,361 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. 

ಜಮಾತ್ ನ ಮುಖ್ಯಸ್ಥ ಮೊಹಮ್ಮದ್ ಸಾದ್ ವಿರುದ್ಧದ ತನಿಖೆ ಪ್ರಗತಿಯಲ್ಲಿದೆ ಎಂದೂ ಸದನಕ್ಕೆ ಸಚಿವರು ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com