ಶ್ರೀನಗರ: ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಆಸ್ಪತ್ರೆ ಸೇರಿದ್ದ ವ್ಯಕ್ತಿಯೊಬ್ಬ ಮನೆಗೆ ತೆರಳಲು ಸತ್ತಂತೆ ನಾಟಕ ಮಾಡಿ, ಸುಳ್ಳು ದಾಖಲೆ ಮಾಡಿಸಿ ಪೊಲೀಸರಿಗೆ ಪಡಬಾರದ ಫಜೀತಿ ತಂದಿಟ್ಟಿದ್ದಾನೆ.
ಆಸ್ಪತ್ರೆ ಸೇರಿದ್ದ ವ್ಯಕ್ತಿಯೊಬ್ಬ ಮನೆ ಸೇರಲು ಸತ್ತಂತೆ ನಟಿಸಿ ಆ್ಯಂಬುಲೆನ್ಸ್ ಮೂಲಕ ಮನೆಗೆ ತಲುಪಿದ ವಿಚಿತ್ರ ಘಟನೆ ಪೂಂಚ್ ಜಿಲ್ಲೆಯಲ್ಲಿ ವರದಿಯಾಗಿದೆ.
ಹಕ್ರಮ್ ಎಂಬಾತ ಕಳೆದ ವಾರ ಗಾಯಗೊಂಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ. ಮಂಗಳವಾರ ಬಿಡುಗಡೆಯಾಗಿದ್ದ, ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಮನೆಗೆ ತೆರಳಲು ಸಾಧ್ಯವಾಗಿರಲಿಲ್ಲ.ಇದಕ್ಕಾಗಿ ತನ್ನ ಅಪ್ತರ ನೆರವಿನಿಂದ ಮನೆಗೆ ತೆರಳಲು ಸುಳ್ಳು ಮರಣ ಪತ್ರ ಮಾಡಿಸಿ ಖಾಸಗಿ ಆ್ಯಂಬುಲೆನ್ಸ್ ಮೂಲಕ ಮನೆಗೆ ತಲುಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಷಯ ಗೊತ್ತಾಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ಆಯಂಬುಲೆನ್ಸ್ ಚಾಲಕನನ್ನು ವಿಚಾರಣೆಗೊಳಪಡಿಸಿ ನಾಲ್ವರನ್ನು ಬಂಧಿಸಿದ್ದಾರೆ. ಹಾಗೂ ಅವರನ್ನು ಹೋಮ್ ಕ್ವಾರಂಟೈನ್ ನಲ್ಲಿರಿಸಿದ್ದಾರೆ.
Advertisement