ವಿಡಿಯೊ ಸಂದೇಶದಲ್ಲಿ ದೂರದೃಷ್ಟಿಯೇ ಇಲ್ಲ, ಪ್ರಧಾನಿಯನ್ನು ಶೋಮ್ಯಾನ್ ಎಂದು ಕರೆದ ಶಶಿ ತರೂರ್!

ಪ್ರಧಾನಿ ನರೇಂದ್ರ ಮೋದಿಯವರ ಶುಕ್ರವಾರದ ವಿಡಿಯೊ ಸಂದೇಶದಲ್ಲಿ ಯಾವುದೇ ದೂರದೃಷ್ಟಿಯಿಲ್ಲ ಎಂದು ಕಾಂಗ್ರೆಸ್ ನಾಯಕ ಸಂಸದ ಶಶಿ ತರೂರ್ ಟೀಕಿಸಿದ್ದಾರೆ.
ವಿಡಿಯೊ ಸಂದೇಶದಲ್ಲಿ ದೂರದೃಷ್ಟಿಯೇ ಇಲ್ಲ, ಪ್ರಧಾನಿಯನ್ನು ಶೋಮ್ಯಾನ್ ಎಂದು ಕರೆದ ಶಶಿ ತರೂರ್!

ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿಯವರ ಶುಕ್ರವಾರದ ವಿಡಿಯೊ ಸಂದೇಶದಲ್ಲಿ ಯಾವುದೇ ದೂರದೃಷ್ಟಿಯಿಲ್ಲ ಎಂದು ಕಾಂಗ್ರೆಸ್ ನಾಯಕ ಸಂಸದ ಶಶಿ ತರೂರ್ ಟೀಕಿಸಿದ್ದಾರೆ.

ಇಂದು ಬೆಳಗ್ಗೆ 9 ಗಂಟೆಗೆ ಪ್ರಧಾನಿ ಮೋದಿ ದೇಶದ ಜನತೆಯನ್ನುದ್ದೇಶಿಸಿ ಕೊರೋನಾ ವೈರಸ್ ಬಗ್ಗೆ ಮಾತನಾಡಿದ್ದರು. ಇದು ಪ್ರಸಾರವಾದ ಕೆಲವೇ ಹೊತ್ತಿನಲ್ಲಿ ಸಂದೇಶ ಆಲಿಸಿ ಟ್ವೀಟ್ ಮಾಡಿರುವ ಶಶಿ ತರೂರ್ ಪ್ರಧಾನಿಯವರನ್ನು ಪ್ರಧಾನ್ ಶೋಮ್ಯಾನ್ ಎಂದು ಉಲ್ಲೇಖಿಸಿದ್ದಾರೆ.

ಈ ಲಾಕ್ ಡೌನ್ ಸಂದರ್ಭದಲ್ಲಿ ಜನರ ನೋವು, ಅವರ ಭಾರ, ಆರ್ಥಿಕ ಸಂಕಷ್ಟದಿಂದ ಹೊರಬರುವುದು, ಜೀವನವನ್ನು ಸುಲಭವಾಗಿಸುವ ಪರಿಹಾರಗಳ ಬಗ್ಗೆ ಪ್ರಧಾನಿ ಮಾತನಾಡಿಲ್ಲ. ಲಾಕ್ ಡೌನ್ ನಂತರದ ಭವಿಷ್ಯದ ಬಗ್ಗೆ ದೂರದೃಷ್ಟಿಯಿಲ್ಲ, ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪವಿಲ್ಲ. ಭಾರತದ ಫೋಟೋ-ಆಪ್ ಪ್ರಧಾನ ಮಂತ್ರಿಯವರು ಸೃಷ್ಟಿಸಿದ ಉತ್ತಮ ಕ್ಷಣದಂತೆ ಅನ್ನಿಸಿತು ಎಂದು ತರೂರ್ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com