ಕೊರೋನಾವೈರಸ್ ತಡೆಗಾಗಿ ಜನತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ- ರಾಷ್ಟ್ರಪತಿ 

ಕೊರೋನಾವೈರಸ್ ತಡೆಗಾಗಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಹಾಗೂ ಸರ್ಕಾರದ ಎಲ್ಲಾ ಮಾರ್ಗಸೂತ್ರಗಳನ್ನು ಅನುಸರಿಸುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್
ರಾಷ್ಟ್ರಪತಿ ರಾಮನಾಥ್ ಕೋವಿಂದ್

ನವದೆಹಲಿ: ಕೊರೋನಾವೈರಸ್ ತಡೆಗಾಗಿ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಹಾಗೂ ಸರ್ಕಾರದ ಎಲ್ಲಾ ಮಾರ್ಗಸೂತ್ರಗಳನ್ನು ಅನುಸರಿಸುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕರೆ ನೀಡಿದ್ದಾರೆ.

ಮಹಾವೀರ ಜಯಂತಿ ಪ್ರಯುಕ್ತ ಸಂದೇಶ ನೀಡಿರುವ ಕೋವಿಂದ್, ಮಹಾವೀರರು ನೀಡಿರುವ  ಅಹಿಂಸೆ, ಸತ್ಯ ಮತ್ತು ತ್ಯಾಗ ಎಲ್ಲ ಕಾಲಕ್ಕೂ ಎಲ್ಲರಿಗೂ ಪ್ರಸ್ತುತವಾಗಲಿವೆ. ಜಗತ್ತಿನಲ್ಲಿ ಶಾಂತಿ, ಪ್ರೀತಿ, ಸದ್ಗುಣ ಮತ್ತು ಸಾಮರಸ್ಯವನ್ನು ಹರಡಲು ಭಗವಾನ್ ಮಹಾವೀರರ ಜೀವನ ಮತ್ತು ಅವರ ತತ್ವಗಳಿಂದ ಸ್ಪೂರ್ತಿ ಪಡೆಯೋಣ ಎಂದು ಅವರು ಹೇಳಿದ್ದಾರೆ.

ಮಹಾವೀರರ ತತ್ವಗಳನ್ನು ಅನುಸರಿಸುವ ಮೂಲಕ ಎಲ್ಲರನ್ನೊಳಗೊಂಡ ಸಮಾಜವನ್ನುಸೃಷ್ಣಿಸೋಣ ಎಂದಿರುವ ರಾಷ್ಟ್ರಪತಿ, ಕೋವಿಡ್ -19 ನಿಯಂತ್ರಣಕ್ಕಾಗಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com