ಆಸ್ತಿ ವಿಚಾರಕ್ಕೆ ಸುತ್ತಿಗೆಯಿಂದ ಮಗನ ತಲೆ ಹೊಡೆದು ಕೊಲೆ ಮಾಡಿದ ತಂದೆ, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಆಸ್ತಿ ಕೇಳಿದ್ದಕ್ಕೆ ತಂದೆಯೇ ತನ್ನ ಮಗನನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 
ಹತ್ಯೆ ದೃಶ್ಯಗಳು
ಹತ್ಯೆ ದೃಶ್ಯಗಳು

ಹೈದರಾಬಾದ್: ಆಸ್ತಿ ಕೇಳಿದ್ದಕ್ಕೆ ತಂದೆಯೇ ತನ್ನ ಮಗನನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ತಂದೆಯೇ ತನ್ನ 40 ವರ್ಷದ ಮಗ ಜಲರಾಜು ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ವೀರರಾಜು ಎಂದು ಗುರುತಿಸಲಾಗಿದ್ದು ಕೊಲೆ ಮಾಡಿದ ನಂತರ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. 

ಜಲರಾಜು ಕುಳಿತು ಕೆಲಸ ಮಾಡುತ್ತಿದ್ದಾಗ ಹಿಂದೆ ಬಂದ ವೀರರಾಜು ಸುತ್ತಿಗೆಯಿಂದ ಹೊಡೆದಿದ್ದಾನೆ. ಆಗ ಮಗ ಪ್ರಜ್ಞಾಹೀನವಾಗಿ ಕೆಳಗೆ ಬಿದ್ದಾಗ ಬಿಡದೆ ಅನೇಕ ಬಾರಿ ಸುತ್ತಿಗೆಯಿಂದ ಹೊಡೆದಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. 

ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದ ಜಲರಾಜು ವಾರದ ಹಿಂದೆ ರಜೆ ಮೇಲೆ ಮನೆಗೆ ಬಂದಿದ್ದರು. ಆಗ ಜಲರಾಜು ತಂದೆ ವೀರರಾಜುರನ್ನು ಆಸ್ತಿ ತನ್ನ ಹೆಸರಿಗೆ ಬರೆಯುವಂತೆ ಕೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ವೀರರಾಜು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com