ಟಿಎಂಸಿ ಶಾಸಕನ ಹತ್ಯೆ ಪ್ರಕರಣ: ಸಿಐಡಿ ಪೂರಕ ಆರೋಪ ಪಟ್ಟಿಯಲ್ಲಿ ಬಿಜೆಪಿ ನಾಯಕ ಮುಕುಲ್ ರಾಯ್ ಹೆಸರು! 

ಟಿಎಂಸಿ ನಾಯಕ ಸತ್ಯಜಿತ್ ಬಿಸ್ವಾಸ್ ಹತ್ಯೆ ಪ್ರಕರಣದ ಸಿಐಡಿ ಪೂರಕ ಆರೋಪ ಪಟ್ಟಿಯಲ್ಲಿ ಬಿಜೆಪಿ ರಾಷ್ಟ್ರ ಉಪಾಧ್ಯಕ್ಷ ಮುಕುಲ್ ರಾಯ್ ಹೆಸರು ದಾಖಲಾಗಿದೆ.
ಟಿಎಂಸಿ ಶಾಸಕನ ಹತ್ಯೆ ಪ್ರಕರಣ: ಸಿಐಡಿ ಪೂರಕ ಆರೋಪ ಪಟ್ಟಿಯಲ್ಲಿ ಬಿಜೆಪಿ ನಾಯಕ ಮುಕುಲ್ ರಾಯ್ ಹೆಸರು!
ಟಿಎಂಸಿ ಶಾಸಕನ ಹತ್ಯೆ ಪ್ರಕರಣ: ಸಿಐಡಿ ಪೂರಕ ಆರೋಪ ಪಟ್ಟಿಯಲ್ಲಿ ಬಿಜೆಪಿ ನಾಯಕ ಮುಕುಲ್ ರಾಯ್ ಹೆಸರು!

ಕೋಲ್ಕತ್ತಾ: ಟಿಎಂಸಿ ನಾಯಕ ಸತ್ಯಜಿತ್ ಬಿಸ್ವಾಸ್ ಹತ್ಯೆ ಪ್ರಕರಣದ ಸಿಐಡಿ ಪೂರಕ ಆರೋಪ ಪಟ್ಟಿಯಲ್ಲಿ ಬಿಜೆಪಿ ರಾಷ್ಟ್ರ ಉಪಾಧ್ಯಕ್ಷ ಮುಕುಲ್ ರಾಯ್ ಹೆಸರು ದಾಖಲಾಗಿದೆ.

ನದಿಯಾ ಜಿಲ್ಲೆಯ ನಾಯಕನ ಹತ್ಯೆಗೆ ಸಂಚು ರೂಪಿಸಿದ್ದವರ ಪೈಕಿ ರಾಯ್ ಅವರ ಹೆಸರನ್ನೂ ಆರೋಪ ಪಟ್ಟಿಯಲ್ಲಿ ತನಿಖಾ ಸಂಸ್ಥೆ ಸೇರಿಸಿದೆ. ರಾಣಾಘಾಟ್ ನ ಬಿಜೆಪಿ ಸಂಸದ ಜಗನ್ನಾಥ್ ಸರ್ಕಾರ್ ಅವರ ಹೆಸರನ್ನು ಈ ಹಿಂದೆ ಸಲ್ಲಿಸಲಾಗಿದ್ದ ಆರೋಪ ಪಟ್ಟಿಯಲ್ಲಿ ಸಿಐಡಿ ದಾಖಲಿಸಿತ್ತು.

ಕಳೆದ ವರ್ಷ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಕೃಷ್ಣಗಂಜ್ ನ ಶಾಸಕ ಸತ್ಯಜಿತ್ ಬಿಸ್ವಾಸ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ತನಿಖೆ ಪ್ರಗತಿಯಾದಂತೆ ಷಡ್ಯಂತ್ರ ರೂಪಿಸಿದವರ ಪಟ್ಟಿಯಲ್ಲಿ ರಾಯ್ ಅವರ ಹೆಸರೂ ಕೇಳಿಬಂದಿದ್ದರಿಂದ ಪೂರಕ ಆರೋಪ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com