ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟಲ್ಲ: ಪ್ರಶಾಂತ್ ಕಿಶೋರ್ 

 ಸುವೇಂದು ಅಧಿಕಾರಿ ಜೊತೆಗೆ ಹಲವು ಶಾಸಕರು ಬಿಜೆಪಿ ಸೇರುವುದರೊಂದಿಗೆ ಕಳೆದ ವಾರಾಂತ್ಯ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲಿಗೆ ಸಂಕಷ್ಟದ ವೀಕೆಂಡ್ ಆಗಿ ಪರಿಣಮಿಸಿತು.
ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್

ಕೊಲ್ಕತ್ತಾ: ಸುವೇಂದು ಅಧಿಕಾರಿ ಜೊತೆಗೆ ಹಲವು ಶಾಸಕರು ಬಿಜೆಪಿ ಸೇರುವುದರೊಂದಿಗೆ ಕಳೆದ ವಾರಾಂತ್ಯ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲಿಗೆ ಸಂಕಷ್ಟದ ವೀಕೆಂಡ್ ಆಗಿ ಪರಿಣಮಿಸಿತು.

ಬಿಜೆಪಿಗೆ ಇನ್ನೂ ಪಕ್ಷಾಂತರ ಮಾಡದ ಹಲವಾರು ಟಿಎಂಸಿ ಶಾಸಕರು ಪಕ್ಷದ ಚುನಾವಣಾ ತಂತ್ರಜ್ಞರಾಗಿ 'ಹೊರಗಿನವರಾದ ಪ್ರಶಾಂತ್ ಕಿಶೋರ್ ಅವರನ್ನು ನೇಮಕ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಿಶೋರ್ ಹೊರತಾಗಿಯೂ, ಬಂಗಾಳದಲ್ಲಿ 200 ಸ್ಥಾನಗಳನ್ನು ಪಡೆಯುವುದಾಗಿ ಬಿಜೆಪಿ ಹೇಳಿಕೊಂಡಿದೆ. ಈ ಸಂಬಂಧ ಇಂದು ಬೆಳಗ್ಗೆ ಹೇಳಿಕೆ ನೀಡಿರುವ ಪ್ರಶಾಂತ್ ಕಿಶೋರ್, ಕೆಲ ಮಾಧ್ಯಮಗಳ ಬೆಂಬಲದಿಂದ ಈ ರೀತಿಯ ಹೈಪ್ ಸೃಷ್ಟಿಸಲಾಗುತಿದೆ. ವಾಸ್ತವವಾಗಿ ಪಶ್ಟಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟುವುದು ಕಷ್ಟಕರವಾಗಲಿದೆ ಎಂದಿದ್ದಾರೆ.

ದಯವಿಟ್ಟು ಈ ಟ್ವೀಟ್ ಸೇವ್ ಮಾಡಿಕೊಳ್ಳಿ, ಬಿಜೆಪಿ ಏನಾದರೂ ಉತ್ತಮ ಸಾಧನೆ ಮಾಡಿದರೆ ತಮ್ಮ ಸ್ಥಾನವನ್ನು ತೊರೆಯುವುದಾಗಿ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com