ಹೌದು, ನಾನು ಪಾಕಿಸ್ತಾನಿಯೇ..: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ 

ಬಿಜೆಪಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ-2019 ಹಾಗೂ ಇನ್ನೂ ಜಾರಿಯಾಗದೇ ಇರುವ (ಎನ್ ಆರ್ ಸಿ) ಯನ್ನು ದೇಶಾದ್ಯಂತ ವ್ಯಾಪಕವಾಗಿ ವಿರೋಧಿಸುವುದನ್ನು ಕಾಂಗ್ರೆಸ್ ಮುಂದುವರೆಸಲಿದೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. 
ಹೌದು, ನಾನು ಪಾಕಿಸ್ತಾನಿಯೇ..: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ
ಹೌದು, ನಾನು ಪಾಕಿಸ್ತಾನಿಯೇ..: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ

ಕೋಲ್ಕತ್ತಾ: ಬಿಜೆಪಿ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ-2019 ಹಾಗೂ ಇನ್ನೂ ಜಾರಿಯಾಗದೇ ಇರುವ (ಎನ್ ಆರ್ ಸಿ) ಯನ್ನು ದೇಶಾದ್ಯಂತ ವ್ಯಾಪಕವಾಗಿ ವಿರೋಧಿಸುವುದನ್ನು ಕಾಂಗ್ರೆಸ್ ಮುಂದುವರೆಸಲಿದೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. 

ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕನಾಗಿರುವ ಅಧೀರ್ ರಂಜನ್ ಚೌಧರಿ ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ, ಹೌದು ನಾನು ಪಾಕಿಸ್ತಾನಿಯೇ... ಬಿಜೆಪಿ ಜನರು ಅವರಿಗೆ ಏನು ಸಾಧ್ಯವೋ ಅದನ್ನು ಮಾಡಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ. 

ದೆಹಲಿಯಲ್ಲಿರುವ ರಂಗ, ಬಿಲ್ಲ ಏನು ಬೇಕಾದರೂ ಹೇಳುತ್ತಾರೆ ಹಾಗೂ ಅದನ್ನು ನಾವು ಒಪ್ಪಿಕೊಳ್ಳಬೇಕು, ಒಪ್ಪದೇ ಇದ್ದರೆ ದೇಶದ್ರೋಹಿಗಳೆಂಬ ಪಟ್ಟ ಕಟ್ಟುತ್ತಾರೆ ಎಂದು ಚೌಧರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಕೋಲ್ಕತ್ತಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಅಧೀರ್ ರಂಜನ್ ಚೌಧರಿ, ನೂತನ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ವಿರುದ್ಧವೂ ಕಿಡಿ ಕಾರಿದ್ದು, ಮಾತು ಕಡಿಮೆ ಮಾಡಿ, ಕೆಲಸ ಹೆಚ್ಚು ಮಾಡಿ ಎಂದು ಹೇಳಿದ್ದಾರೆ. ಸಂಸತ್ ಒಪ್ಪಿದರೆ ಪಿಒಕೆ ವಶಕ್ಕೆ ಪಡೆಯುವುದಕ್ಕೆ ಸಿದ್ಧ ಎಂದು ನೂತನ ಸೇನಾ ಮುಖ್ಯಸ್ಥರು ಹೇಳಿಕೆ ನೀಡಿದ್ದರು. 

ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಖಾಸಗಿ ಆಸ್ತಿಯಲ್ಲ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com