ನಾಗ್ಪುರ: ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದಿರುವುದಕ್ಕಾಗಿ ಶಿವಸೇನೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿರಲಿಲ್ಲ.
ಆದರೆ ಶಿವಸೇನೆ ದ್ರೋಹ ಬಗೆಯಿತು ಎಂದು ಆರೋಪಿಸಿದ್ದಾರೆ. ಇಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, "ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿಲ್ಲ, ಆದರೆ ಶಿವಸೇನೆ ದ್ರೋಹ ಬಗೆದಿದೆ" ಎಂದು ದೂರಿದರು. ಬಿಜೆಪಿಯೊಂದಿಗಿನ 30 ವರ್ಷಗಳ ಮೈತ್ರಿಯನ್ನು ಮುರಿದಿದ್ದಕ್ಕಾಗಿ ಸೇನೆಯನ್ನು ಕಟುವಾಗಿ ಟೀಕಿಸಿದ ಅವರು, "ಶಿವಸೇನೆ ತನ್ನ 'ಮಿತ್ರ ಪಕ್ಷವನ್ನು ಮಾತ್ರವಲ್ಲದೆ ಅಧಿಕಾರದ ದೃಷ್ಟಿಯಿಂದ ತನ್ನದೇ ಆದ ಸಿದ್ಧಾಂತವನ್ನೂ ಸಹ ತ್ಯಜಿಸಿದೆ' ಎಂದು ಹೇಳಿದರು.
Advertisement